ಹುಬ್ಬಳ್ಳಿ-ಧಾರವಾಡ ಸುದ್ದಿ

ಚಿಂದಿ ಆಯುವ ಮಹಿಳೆ ಭೀಕರ ಕೊಲೆ

ಪತಿಯಿಂದಲೇ ಕುಡಿದ ಮತ್ತಿನಲ್ಲಿ ದುಷ್ಕೃತ್ಯ ಶಂಕೆ

ಹುಬ್ಬಳ್ಳಿ: ಚಿಂದಿ ಆಯುವ ಮಹಿಳೆಯನ್ನು ಭೀಕರವಾಗಿ ಕೊಲೆಗೈದ ಘಟನೆ ನೆಹರೂ ಮೈದಾನ ಬಳಿಯ ಕೃಷ್ಣ ಭವನ ಎದುರು ಇಂದು ಬೆಳಗಿನ ಜಾವ ನಡೆದಿದೆ.
ದಾವಣಗೆರೆ ಮೂಲದ ಮಹಿಳೆ ಸುಮಾ(30) ಎಂಬಾಕೆಯ ಕೊಲೆಯಾಗಿದ್ದು,ಈಕೆ ಬಳ್ಳಾರಿ ಮೂಲದ ಭಿಕ್ಷುಕ ರಾಮು(40) ಎಂಬಾತನ ಪತ್ನಿಯಾಗಿದ್ದು, ಆತನೆ ಕೊಲೆ ಮಾಡಿದ್ದಾನೆಂದು ಹೇಳಲಾಗುತ್ತಿದೆಯಾದರೂ ಖಚಿತಪಟ್ಟಿಲ್ಲ. ಇವರಿಬ್ಬರು ಕಳೆದು ಒಂದು ವರ್ಷದಿಂದ ಹುಬ್ಬಳ್ಳಿಯಲ್ಲಿ ವಾಸವಾಗಿದ್ದರಲ್ಲದೇ ಇಬ್ಬರಿಗೂ ಎರಡನೆ ಮದುವೆಯಾಗಿದೆ. ಪತಿ ರಾಮಣ್ಣನೆ ಕುಡಿದ ಮತ್ತಿನಲ್ಲೇ ಕೊಲೆ ಮಾಡಿದ್ದಾನೆಂದು ಹೇಳಲಾಗುತ್ತಿದ್ದು, ಆದರೆ ತಾನು ಮದ್ಯ ಸೇವಿಸಿ ಮಲಗಿದ್ದು ಬೆಳಿಗ್ಗೆ ಎದ್ದಾಗ ಹೀಗಾಗಿದೆ ಎಂದು ರಾಮಣ್ಣ ಹೇಳಿದ್ದಾನೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೇ ಶಹರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಕಿಮ್ಸಗೆ ರವಾನೆ ಮಾಡಿದ್ದಾರೆ.
ಬೆಳಿಗ್ಗೆ ಅಂಗಡಿ ತೆಗೆಯುವವರು ಘಟನೆಯನ್ನ ನೋಡಿ ಬೆಚ್ಚಿಬಿದ್ದಿದ್ದಾರೆ. ಕಲ್ಲು ಹಾಗೂ ಬಾಟಲಿಯಿಂದ ಹೊಡೆದು ಕೊಲೆ ಮಾಡಲಾಗಿದ್ದು, ಪತಿಯನ್ನೂ ಸಹ ಶಹರ ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಡಿಸಿಪಿ, ಎಸಿಪಿ ಹಾಗೂ ಶಹರ ಠಾಣೆ ಇನ್ಸಪೆಕ್ಟರ್ ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

administrator

Related Articles

Leave a Reply

Your email address will not be published. Required fields are marked *