ಹುಬ್ಬಳ್ಳಿ-ಧಾರವಾಡ ಸುದ್ದಿ
ಬಡ್ಡಿ ಕುಳಗಳ ಕಿರುಕುಳ : ನೇಣಿಗೆ ಶರಣು

ಬಡ್ಡಿ ಕುಳಗಳ ಕಿರುಕುಳ : ನೇಣಿಗೆ ಶರಣು

ಹುಬ್ಬಳ್ಳಿ: ಮೀಟರ್ ಬಡ್ಡಿ ಕುಳಗಳ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ನೇಣು ಹಾಕಿಕೊಂಡಿರುವ ಘಟನೆ ಹಳೇ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ.
ನ್ಯೂ ಆನಂದನಗರದ ಮದೀನಿ ಮಸ್ಜಿದ್ ಬಳಿಯ ನಿವಾಸಿ ಮಹಬೂಬಸಾಬ ಮುಕ್ತುಂಸಾಬ ನಾಲಬಂದ ಎಂಬಾತನೇ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವನಾಗಿದ್ದಾನೆ.
ಸಿದ್ಧಾರೂಢಮಠದ ಕ್ರಾಸ್ ಬಳಿಯ ನಿವಾಸಿಗಳಾದ ಲೇವಾದೇವಿದಾರರಾದ ಪ್ರಮೋದ, ವಿಶಾಲ ಹಾಗೂ 2-3 ಜನರು ಸೇರಿಕೊಂಡು ಕಿರುಕುಳ ನೀಡಿದ್ದರಿಂz ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹಳೇಹುಬ್ಬಳ್ಳಿ ಠಾಣೆಗೆ ನೀಡಿದ ದೂರಿನಲ್ಲಿ ಮೃತನ ಪತ್ನಿ ರಾಜಬೀ ನಾಲಬಂದ ಹೇಳಿದ್ದಾರೆ. ಸೆಂಟ್ರಿಂಗ್ ಕೆಲಸ ಹಾಗೂ ಅಟೋ ರಿಕ್ಷಾ ಓಡಿಸುತ್ತಿದ್ದ ತನ್ನ ಗಂಡನು ಪ್ರಮೋದ ಹಾಗೂ ವಿಶಾಲ ಬಳಿಯಿಂದ ಹಣ ಬಡ್ಡಿಯ ಮೇಲೆ ಹಣ ಪಡೆದಿದ್ದು ವಾಪಸ್ ಮಾಡಿದ್ದರು.ಮತ್ತೆ ದಿ. 9 ರಂದು ಬೆಳಿಗ್ಗೆ 10.30 ರ ಸುಮಾರಿಗೆ ತನ್ನ ಪತಿ ಹಾಗೂ ಮೈದುನನ್ನು ಕರೆದೊಯ್ದು ಹಣ ವಾಪಸ್ ಕೊಡದಿದ್ದರೆ ಹುಷಾರ್ ಎಂದು ಜೀವ ಬೆದರಿಕೆ ಹಾಕಿದ್ದು ಮನೆಗೆ ವಾಪಸಾಗಿದ್ದು, ತಾವು ಹೊರ ಹೋದ ಸಂದರ್ಭದಲ್ಲಿ ನೇಣು ಹಾಕಿಕೊಂಡಿದ್ದಾನೆಂದು ಹೇಳಿದ್ದಾರೆ.
ಹಳೇ ಹುಬ್ಬಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

administrator

Related Articles

Leave a Reply

Your email address will not be published. Required fields are marked *