ಹುಬ್ಬಳ್ಳಿ-ಧಾರವಾಡ ಸುದ್ದಿ
ಪಾಲಿಕೆ ಸದಸ್ಯರಿಗೆ ಧಾರವಾಡ ಹೊಟೆಲ್ ಸಂಘದಿಂದ ಸನ್ಮಾನ

ಪಾಲಿಕೆ ಸದಸ್ಯರಿಗೆ ಧಾರವಾಡ ಹೊಟೆಲ್ ಸಂಘದಿಂದ ಸನ್ಮಾನ

ಧಾರವಾಡ: ಧಾರವಾಡ ಹೋಟೆಲ್ ಮತ್ತು ಬೇಕರಿ ಮಾಲಿಕರ ಸಂಘದ ವತಿಯಿಂದ ಧಾರವಾಡ ವಿಭಾಗದ ಪಾಲಿಕೆಯ ಎಲ್ಲ ೨೬ ಸದಸ್ಯರನ್ನು ಇಲ್ಲಿಯ ಮಂದಾರ ಹೋಟೆಲಿನಲ್ಲಿ ಸನ್ಮಾನಿಸಿ ಗೌರವಿಸಲಾಯಿತು.


ಕರ್ನಾಟಕ ರಾಜ್ಯ ಹೋಟೆಲ್ ಸಂಘದ ಗೌರವ ಕಾರ್ಯದರ್ಶಿ ಮಧುಕರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವಳಿನಗರದಲ್ಲಿ ಹೊಟೆಲ್ ಮೂಲದವರಾದ ಮೂರು ಜನ ಪಾಲಿಕೆಗೆ ಆಯ್ಕೆಯಾಗಿರುವುದು ನಿಜಕ್ಕೂ ಸಂತಸ ತಂದಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ ಮಾತನಾಡಿ, ಕೋವಿಡ್‌ನಿಂದ ಹೋಟೆಲ್ ಮಾಲೀಕರಿಗೆ ತುಂಬಾ ಸಮಸ್ಯೆ ಆಗಿದ್ದು, ಪಾಲಿಕೆ ಅಧಿಕಾರಿಗಳ ಕಿರುಕುಳ ತುಂಬಾ ಮಾಡುತ್ತಿದ್ದಾರೆ. ಆದ ಕಾರಣ ನೂತನವಾಗಿ ಆಯ್ಕೆಯಾದ ಸದಸ್ಯರು ತಮ್ಮ ಬೆಂಬಲಕ್ಕೆ ನಿಲ್ಲಬೇಕು. ಅಲ್ಲದೇ ನಗರ ಅಭಿವೃದ್ಧಿಗೆ ಯಾವುದೇ ಸಹಾಯ ಸಹಕಾರ ನೀಡಲು ತಮ್ಮ ಸಂಘ ಸದಾ ಸಿದ್ಧ ಎಂದು ಹೇಳಿದರು.


ಸನ್ಮಾನ ಸ್ವೀಕರಿಸಿದ ಪಾಲಿಕೆ ಸದಸ್ಯ ಶಿವು ಹಿರೇಮಠ ಮಾತನಾಡಿ, ಹೋಟೆಲ್ ಸಂಘದವರ ಯಾವುದೇ ಸಮಸ್ಯೆ ಇದ್ದಲ್ಲಿ ಅವುಗಳನ್ನು ಪ್ರಾಮಾಣಿಕವಾಗಿ ಪರಿಹಾರ ಕೊಡಿಸುತ್ತೇವೆ ಎಂದು ಎಲ್ಲ ಸದಸ್ಯರ ಪರವಾಗಿ ಭರವಸೆ ನೀಡಿದರು.
ಜನಾರ್ದನ ಸರವಾಯ, ಚಂದ್ರಶೇಖರ ಪುರಾಣಿಕ, ಸುರೇಶ ಹೆಗಡೆ, ಶ್ರೀಧರ ಶೆಟ್ಟಿ, ಸಂತೋಷ ಶೆಟ್ಟಿ, ವಿಜಯಾನಂದ ಶೆಟ್ಟಿ, ಗಿರೀಶ ಶೆಟ್ಟಿ, ಪ್ರದೀಪ ಪಕ್ಕಳ ಹುಬ್ಬಳ್ಳಿ ಹೋಟೆಲ್ ಸಂಘದ ಪದಾಧಿಕಾರಿಗಳು ಸೇರಿದಂತೆ ಸುಮಾರು ೪೫೦ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಶ್ರೀಧರ ಶೆಟ್ಟಿ ಸ್ವಾಗತಿಸಿದರು.

administrator

Related Articles

Leave a Reply

Your email address will not be published. Required fields are marked *