ಹುಬ್ಬಳ್ಳಿ-ಧಾರವಾಡ ಸುದ್ದಿ
ತಕರಾರು ಅರ್ಜಿ ಕೊಡಲು ಸೂಚನೆ

ತಕರಾರು ಅರ್ಜಿ ಕೊಡಲು ಸೂಚನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ವಿಶೇಷ ಸಭೆ ದೇಶಪಾಂಡೆ ನಗರ ಬಿಜೆಪಿ ಕಾರ್ಯಾಲಯ ದಲ್ಲಿ ಸಂತೋಷ್ ಚವ್ಹಾಣ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಪಾಲಿಕೆ ಚುನಾವಣಾ ಮತದಾರರ ಪಟ್ಟಿಯ ಕರಡು ಪ್ರತಿ ಯನ್ನು ಅಭ್ಯಸಿಸಿ ಅದರಲ್ಲಿರುವ ಲೋಪದೋಷಗಳನ್ನು ಸರಿ ಮಾಡುವ ಕುರಿತು ಚುನಾವಣಾ ಅಧಿಕಾರಿಗಳಿಗೆ ತಕರಾರು ಅರ್ಜಿ ಕೊಡಲು ಹಾಗೂ ಕ್ಷೇತ್ರದಲ್ಲಿ ಬರುವ ಎಲ್ಲ ವಾರ್ಡಗಳಿಗೆ ಸೂಚನೆ ನೀಡಲಾಯಿತು. ಹೊಸದಾಗಿ ಮತದಾರರ ನೋಂದಣಿ ಕಾರ್ಯ ಮಾಡಲು ಕಾರ್ಯಕರ್ತರಿಗೆ ತಿಳಿಸ ಲಾಯಿತು.
ಶಿಸ್ತು ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜ್ ಪಾಟೀಲ್, ಹುಡಾ ಅಧ್ಯಕ್ಷ ನಾಗೇಶ್ ಕಲ್ಬುರ್ಗಿ, ಕೆಎಸ್‌ಡಿಎಲ್ ನಿರ್ದೇಶಕ ಮಲ್ಲಿಕಾರ್ಜುನ್ ಸಾಹುಕಾರ, ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ತಿಪ್ಪಣ್ಣ ಮಜ್ಜಿಗಿ, ದತ್ತಮೂರ್ತಿ ಕುಲಕರ್ಣಿ, ಮುಖಂಡರಾದ ಡಾ.ಪಾಂಡುರಂಗ ಪಾಟೀಲ್, ಮಹೇಶ್ ಬುರ್ಲಿ, ವಿರುಪಾಕ್ಷ ರಾಯನಗೌಡ, ಗೋಪಾಲ ಬದ್ದಿ ಸಹಿತ ಮಾಜಿ ಪಾಲಿಕೆ ಸದಸ್ಯರು ಹಾಗೂ ಪದಾಧಿಕಾರಿಗಳು ಇದ್ದರು.

 

administrator

Related Articles

Leave a Reply

Your email address will not be published. Required fields are marked *