ಹುಬ್ಬಳ್ಳಿ-ಧಾರವಾಡ ಸುದ್ದಿ

ಲೋಕ ಕಲ್ಯಾಣಕ್ಕಾಗಿ ಸಿದ್ದಾರೂಢರ ಮಠದವರೆಗೆ ಪಾದಯಾತ್ರೆ

ಧಾರವಾಡ: ಇಲ್ಲಿನ ಕಿರಣ ಗೆಳೆಯರ ಬಳಗದ ವತಿಯಿಂದ ಹುಬ್ಬಳ್ಳಿಯ ಸಿದ್ದಾರೂಢರ ಮಠದವರೆಗೆ ಪಾದಯಾತ್ರೆಯನ್ನು ಕಳೆದ ಆ. 22 ರಂದು ರಾತ್ರಿ ಹಮ್ಮಿಕೊಳ್ಳಲಾಗಿತ್ತು.


ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಕಿರಣ ಗೆಳೆಯರ ಬಳಗವು ಲೋಕ ಕಲ್ಯಾಣಕ್ಕಾಗಿ ಹುಬ್ಬಳ್ಳಿಯ ಸಿದ್ದಾರೂಢರ ಮಠದವರೆಗೆ ಪಾದಯಾತ್ರೆ ಮೂಲಕ ತೆರಳಿ ಬೆಳಗ್ಗೆ ಅಜ್ಜನ ದರ್ಶನ ಪಡೆದು ಪೂಜೆ ಸಲ್ಲಿಸುತ್ತ ಬರಲಾಗಿದೆ.


ಕಳೆದ ಆ. 22 ರಂದು ರಾತ್ರಿ ನಗರದ ಎನ್‌ಟಿಟಿಎಫ್ ಬಳಿಯ ಸಿದ್ಧಿವಿನಾಯಕ ಮಂದಿರದಲ್ಲಿ ಪೂಜೆ ಸಲ್ಲಿಸಿ ಪಾದಯತ್ರೆ ಆರಂಭಿಸಲಾಯಿತು.

ಬೆಳಗ್ಗೆ ಮಠದಲ್ಲಿ ಪೂಜೆ ಸಲ್ಲಿಸಿ ಲೋಕ ಕಲ್ಯಾಣಕ್ಕೆ ಪ್ರಾರ್ಥಿಸಲಾಯಿತು. ಕೇವಲ 6 ಜನರಿಂದ ಆರಂಭವಾದ ಪಾದಯಾತ್ರೆಯಲ್ಲಿ ಈ ವರ್ಷ 35ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.


ಪಾದಯಾತ್ರೆಯಲ್ಲಿ ಹಾವಣಗಿ ಕುಟುಂಬದ ಸದಸ್ಯರು ಸೇರಿದಂತೆ ವಿನಯ ಮಹೇಂದ್ರಕರ, ಸತೀಶ ಹೆಗಡೆ, ಕುಮಾರ ಚಿನಿವಾಲ, ಡಾ.ಕಿರಣ ಬೆಲ್ಲದ, ಸಂಭಾಜಿ ಗೋಡಸೆ, ಪ್ರತಾಪ, ಸಂತೋಷ ತುರಮರಿ, ಅಶೋಕ ಪಾಟೀಲ, ಬಸವರಾಜ ಖೋತ, ವಿಶ್ವನಾಥ ನಡಕಟ್ಟಿ, ಸಂಜು, ದೀಪಕ ಪಾಟೀಲ, ಪ್ರಜ್ವಲ ಸೂರ್ಯವಂಶಿ, ಸತೀಶ ವೀರಾಪುರ, ಶರದ ಟಿಕಾರೆ, ಸಂದೇಶ ಸಾವಂತ, ವಿನಯ ಶಿಂಧೆ, ಪ್ರತಾಪ ಕಾಮತ, ಸೈಯ್ಯದತುರಾಬುದ್ದಿನ್, ವೃಷಭ ಹಿರೇಮಠ, ತುರಾಬ ಮೈಸೂರು ಭಾಗವಹಿಸಿದ್ದರು.

administrator

Related Articles

Leave a Reply

Your email address will not be published. Required fields are marked *