ಹುಬ್ಬಳ್ಳಿ-ಧಾರವಾಡ ಸುದ್ದಿ
16 ಬಿಜೆಪಿ ಬಂಡುಕೋರರ ಉಚ್ಛಾಟನೆ

16 ಬಿಜೆಪಿ ಬಂಡುಕೋರರ ಉಚ್ಛಾಟನೆ

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದವರನ್ನು ಹೊರ ಹಾಕಿದ ಬೆನ್ನ ಹಿಂದಯೇ ಬಿಜೆಪಿ ಸಹ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಕಣಕ್ಕಿಳಿದಿದ್ದ 16 ಸದಸ್ಯರನ್ನು 6 ವರ್ಷ ಕಾಲ ಉಚ್ಛಾಟಿಸಲಾಗಿದೆ ಎಂದು ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಅರವಿಂದ ಬೆಲ್ಲದ ಆದೇಶ ಹೊರಡಿಸಿದ್ದಾರೆ.


ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯವಾಗಿ ಸ್ಪರ್ಧಿಸುವ ಮೂಲಕ ಪಕ್ಷದ ನಿಯಮಗಳನ್ನು ಉಲ್ಲಂಘಿಸಿದ 16 ಅಭ್ಯರ್ಥಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಉಚ್ಚಾಟನೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸೂರಜ ಪುಡಕಲಕಟ್ಟಿ, ಮಂಜುನಾಥ ನಡಟ್ಟಿ, ರಾಕೇಶ ದೊಡ್ಡಮನಿ, ರಾಜು ಕಡೇಮನಿ, ಶಶಿ ಬಿಜವಾಡ, ಲಕ್ಷಿö್ಮ ಉಪ್ಪಾರ, ಲಕ್ಷö್ಮಣ ಉಪ್ಪಾರ, ಹೂವಪ್ಪ ದಾಯಗೋಡಿ, ಹುಲಿಗಪ್ಪ ಚಲವಾದಿ, ಮಂಜು ವಡಕಣ್ಣವರ, ಕಿರಣ ಉಪ್ಪಾರ, ಲಕ್ಷö್ಮಣ ಕೊರಪಾಟಿ, ರಾಮಚಂದ್ರ ಹದಗಲ್, ಸುದೀಂದ್ರ ಹೆಗಡೆ, ಮಂಜುಳಾ ಅಕ್ಕೂರ ಇವರುಗಳು ಉಚ್ಛಾಟನೆಗೊಂಡವರಾಗಿದ್ದಾರೆ.

 

administrator

Related Articles

Leave a Reply

Your email address will not be published. Required fields are marked *