ಹುಬ್ಬಳ್ಳಿ-ಧಾರವಾಡ ಸುದ್ದಿ

ಐಟಿ ದಾಳಿ ಹೆದರಿಸುವ ತಂತ್ರ: ಶಿವಲೀಲಾ ಕುಲಕರ್ಣಿ

ಬಿಜೆಪಿ ಷಡ್ಯಂತ್ರಕ್ಕೆ ತಕ್ಕ ಉತ್ತರ

ಧಾರವಾಡ: ಮತದಾನಕ್ಕೆ ಮೂರ್ನಾಲು ದಿನ ಮಾತ್ರ ಇರುವಾಗ ಐಟಿ ದಾಳಿ ಮಾಡುವುದು ಸರಿಯಲ್ಲ. ಇದರ ಹಿಂದೆ ಬಿಜೆಪಿಯವರ ರಾಜಕೀಯ ಷಡ್ಯಂತ್ರ ಇದೆ.ಅಧಿಕಾರಿಗಳು ಬಿಜೆಪಿಯ ಏಜೆಂಟ್‌ರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.


ಇಂತಹ ಷಡ್ಯಂತ್ರಗಳಿಗೆ ಕ್ಷೇತ್ರದ ಜನತೆ ತಕ್ಕ ಉತ್ತರ ನೀಡಲಿದ್ದಾರೆ. ನಮ್ಮನ್ನು ಕಟ್ಟಿ ಕೂಡಿಸುವ ಉದ್ದೇಶದಿಂದ ಈ ತರ ಕಿರುಕುಳ ನೀಡಲಾಗುತ್ತಿದೆ ಎಂದರು.
ಬ್ಲಾಕ್ ಅಧ್ಯಕ್ಷ ಈಶ್ವರ ಶಿವಳ್ಳಿ, ಮಾತನಾಡಿ ತಾವೂ ಸುಮಾರು ೨೮ ವರ್ಷಗಳ ಕಾಲ ಅದೇ ಪಕ್ಷವನ್ನು ಕಟ್ಟಿದ್ದೇನೆ. ಅದಕ್ಕೆ ಉಡುಗೊರೆ ರೂಪದಲ್ಲಿ ಪ್ರಹ್ಲಾದ ಜೋಶಿ ಮತ್ತು ಅಮೃತ ದೇಸಾಯಿ ಅವರ ಕೆಲಸ ಇದಾಗಿದೆ. ಕೆಲಸ ಮಾಡುವವರನ್ನು ಹೆದರಿಸಿದರೆ ಗೆಲುವು ಆಗುವುದಿಲ್ಲ. ಅದರಲ್ಲಿ ಯಶಸ್ವಿ ಆಗುವುದಿಲ್ಲ. ಅವರು ಎಸೆದ ಚೆಂಡು ಅವರಿಗೂ ಬಡಿಯುತ್ತದೆ ಎನ್ನುವುದನ್ನು ಮರೆತಿದ್ದಾರೆ ಎಂದರು.


ಇನ್ನೋರ್ವ ಬ್ಲಾಕ್ ಅಧ್ಯಕ್ಷ ಅರವಿಂದ ಏಗನಗೌಡರ ಮಾತನಾಡಿ, ರಾಜ್ಯದಲ್ಲಿ ಎಲ್ಲಿಯೂ ಐಟಿ ದಾಳಿ ಆಗಿಲ್ಲ. ಈ ಕ್ಷೇತ್ರದಲ್ಲಿ ಮಾತ್ರ ದಾಳಿ ಮಾಡಲಾಗಿದೆ. ಇದು ಹೆದರಿಸುವ ತಂತ್ರ ಮಾತ್ರ ಆಗಿದೆ. ಕಾನೂನಿನ ಪ್ರಕಾರ ನಾವು ಇದ್ದೇವೆ. ಅವರು ಕೇಳಿದ ಪ್ರತಿಯೊಂದು ದಾಖಲೆ ನೀಡುತ್ತೇವೆ. ಆದರೆ, ಸಮಯ ಸಂದರ್ಭ ತಪ್ಪಾಗಿದೆ. ನಾವು ಇದಕ್ಕೆ ಕಾನೂನು ಹೋರಾಟ ಮಾಡಲಿದ್ದೇವೆ ಎಂದರು.
ಪ್ರಶಾಂತ ಕೇಕರೆ, ಪ್ರದೀಪ ಪಾಟೀಲ ಸೇರಿದಂತೆ ಇತರರಿದ್ದರು.

administrator

Related Articles

Leave a Reply

Your email address will not be published. Required fields are marked *