ಹುಬ್ಬಳ್ಳಿ-ಧಾರವಾಡ ಸುದ್ದಿ
ಬಿಜೆಪಿ ಗ್ರಾಮಾಂತರ ಮಂಡಳಗಳಿಗೆ ಅಧ್ಯಕ್ಷರ ನೇಮಕ

ಬಿಜೆಪಿ ಗ್ರಾಮಾಂತರ ಮಂಡಳಗಳಿಗೆ ಅಧ್ಯಕ್ಷರ ನೇಮಕ

ಧಾರವಾಡ: ಗ್ರಾಮಾಂತರ ಜಿಲ್ಲಾ ಬಿಜೆಪಿಯ ಮಂಡಲ ಅಧ್ಯಕ್ಷರನ್ನು ಜಿಲ್ಲಾ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ ನೇಮಕ ಮಾಡಿ ಆದೇಶಿಸಿದ್ದಾರೆ.

ಶಂಕರ ಕೊಮಾರದೇಸಾಯಿ (ಧಾರವಾಡ ಗ್ರಾಮೀಣ), ಯಲ್ಲಪ್ಪ ಹುಲಿಯಪ್ಪನವರ (ಅಳ್ನಾವರ), ಗಂಗಪ್ಪ ಮನಮಿ(ನವಲಗುಂದ), ನಾಗನಗೌಡ ಸಾತ್ಮಾರ (ಕುಂದಗೋಳ), ಮಂಜುನಾಥ ಗಣಿ (ನವಲಗುಂದ ಕ್ಷೇತ್ರ, ಹುಬ್ಬಳ್ಳಿ ತಾಲೂಕ), ಯಲ್ಲಾರಿ ಶಿಂಧೆ (ಕಲಘಟಗಿ), ಷಣ್ಮುಖ ಐಹೊಳಿ (ಕುಂದಗೋಳ ಕ್ಷೇತ್ರ ಹುಬ್ಬಳ್ಳಿ ತಾಲೂಕ) ಅವರನ್ನು ನೇಮಕ ಮಾಡಿದ್ದಾರೆ.

ಮಂಡಲ ಅಧ್ಯಕ್ಷರ ಆಯ್ಕೆ ವಿಷಯದಲ್ಲಿ ಬಹಳಷ್ಟು ಜನ ಆಕಾಂಕ್ಷಿಗಳ ಒತ್ತಡದಿಂದ ಪಟ್ಟಿ ಬಿಡುಗಡೆ ವಿಳಂಬವಾಗಿತ್ತು. ಜೊತೆಗೆ ಪಕ್ಷದ ಮುಖಂಡರು ತಮ್ಮ ಬೆಂಬಲಿಗರನ್ನೇ ಪ್ರತಿಷ್ಠಾಪಿಸಬೇಕು ಎಂದು ಬಯಸಿದ್ದು ಮತ್ತಷ್ಟು ವಿಳಂಬಕ್ಕೆ ಕಾರಣವಾಗಿತ್ತು. ಕಲಘಟಗಿ, ಕುಂದಗೋಳ, ಹುಬ್ಬಳ್ಳಿ ಧಾರವಾಡ ಗ್ರಾಮೀಣ ಸೇರಿ ಹಲವು ಕಡೆ ಅಧ್ಯಕ್ಷ ಗಾಧಿಗೆ ಭಾರೀ ಪೈಪೋಟಿಯಿತ್ತು.

administrator

Related Articles

Leave a Reply

Your email address will not be published. Required fields are marked *