ಹುಬ್ಬಳ್ಳಿ-ಧಾರವಾಡ ಸುದ್ದಿ
’ಅಪ್ಸರಾ’ ಮಾಲೀಕ ರಾಯ್ಕರ್ ಇನ್ನಿಲ್ಲ

’ಅಪ್ಸರಾ’ ಮಾಲೀಕ ರಾಯ್ಕರ್ ಇನ್ನಿಲ್ಲ

ಹುಬ್ಬಳ್ಳಿ: ಹುಬ್ಬಳ್ಳಿಯ ಪ್ರತಿಷ್ಠಿತ ಅಪ್ಸರಾ, ಸುಧಾ ಟಾಕೀಜ್‌ಗಳ ಮಾಲಿಕರು, ಉತ್ತರ ಕರ್ನಾಟಕದ ಪ್ರಸಿದ್ಧ ಚಲನ ಚಿತ್ರೋದ್ಯಮಿ ಹಾಗೂ ದೈವಜ್ಞ ಸಮಾಜದ ಗಣ್ಯರಾದ ರಮೇಶ್ ಎನ್.ರಾಯ್ಕರ್(75) ಇವರು ಇಂದು ನಿಧನರಾಗಿದ್ದಾರೆ.
ಮೃತರು ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಮೃತರ ಅಂತಿಮಯಾತ್ರೆಯು ಇಂದು ಸಂಜೆ ೬ಗಂಟೆಗೆ ಹೊಸೂರಿನ ಸ್ವಗೃಹದಿಂದ ಹೊರಡಲಿದೆ.
ಮೃತರು ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘ ಹಾಗೂ ಹುಬ್ಬಳ್ಳಿಯ ದೈವಜ್ಞ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿದ್ದರಲ್ಲದೇ ಕೊಡುಗೈ ದಾನಿ ಎಂದೇ ಕರೆಸಿಕೊಳ್ಳುತ್ತಿದ್ದರು.
ಸಂತಾಪ: ರಮೇಶ ರಾಯ್ಕರ್ ನಿಧನಕ್ಕೆ ದೈವಜ್ಞ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತೀವ್ರ ಸಂತಾಪ ಸೂಚಿಸಿದ್ದು ಸಮಾಜಕ್ಕೆ ತುಂಬಲಾರದ ಹಾನಿಯಾಗಿದೆ ಎಂದಿದ್ದಾರೆ.
ಬಿಜೆಪಿ ಮುಖಂಡ ವಿನೋದ ರೇವಣಕರ ಸೇರಿದಂತೆ ಅನೇಕ ಗಣ್ಯರು ರಾಯ್ಕರ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

administrator

Related Articles

Leave a Reply

Your email address will not be published. Required fields are marked *