ಹುಬ್ಬಳ್ಳಿ-ಧಾರವಾಡ ಸುದ್ದಿ

ರಾತ್ರೋ ರಾತ್ರಿ ನಿಲ್ದಾಣ ತೆರವು

ರಿಕ್ಷಾ ಚಾಲಕರ ಪ್ರತಿಭಟನೆ

ಹುಬ್ಬಳ್ಳಿ: ನಗರದ ಹಳೇ ಬಸ್ ನಿಲ್ದಾಣದ ಮುಂಭಾಗದಲ್ಲಿನ ಆಟೋ ಸ್ಟ್ಯಾಂಡ್ ಅನ್ನು ರಾತ್ರೋರಾತ್ರಿ ತೆರವುಗೊಳಿಸಿದ್ದನ್ನು ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘವು ಖಂಡಿಸಿ ಪ್ರತಿಭಟನೆ ನಡೆಸಿದರು.
ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ ಸದಸ್ಯರು ನಗರದ ಚೆನ್ನಮ್ಮ ವೃತ್ತದಿಂದ ಹು-ಧಾ ಮಹಾನಗರ ಪಾಲಿಕೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ, ಮುರಳಿ ಇಂಗಳಹಳ್ಳಿ, ಗುರು ಬೆಟಗೇರಿ, ಜಾಫರ ಕೆರೂರ, ಮಹಾವೀರ ಜಿಲಾನಾ, ಕಲ್ಲಪ್ಪ ಅಣ್ಣಿಗೇರಿ, ದಾವೂದ ಅಲಿ ಶೇಖ, ರಫೀಕ ಕುಂದಗೋಳ, ದಾವಲಸಾಬ ಕುರಟ್ಟಿ, ಬಾಬರ ಜಮಖಾನೆ, ರಾಜೇಶ ಬಿಜವಾಡ, ಮಂಜು ಕೋಳಿಕಾಳ, ರಾಕೇಶ ಚೌಹಾಣ, ಮಾರುತಿ ಅಂಚಟಗೇರಿ, ಮಲ್ಲಿಕಾರ್ಜುನ ನಂದಿಹಾಳ, ವೀರಣ್ಣ ಲಾದುಂಚಿ, ಹನುಮಂತ ಮುರಳಿಮನಿ, ಮಂಜು ಕಮಡೊಳ್ಳಿ, ಕರಣ ಗಜಾಮ ಇರ್ಷಾದ ಪಂತೋಜಿ, ಚಂದ್ರಗೌಡ ಪಾಟೀಲ ಇನ್ನಿತರರಿದ್ದರು.

administrator

Related Articles

Leave a Reply

Your email address will not be published. Required fields are marked *