ಹುಬ್ಬಳ್ಳಿ-ಧಾರವಾಡ ಸುದ್ದಿ

’ಪಶ್ಚಿಮ’ದಲ್ಲಿ ಬೃಹತ್ ತಿರಂಗಾ ಪಾದಯಾತ್ರೆ

ಧಾರವಾಡ : ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ರಾಣಿ ಚೆನ್ನಮ್ಮ ಬ್ಲಾಕ್ ಹಾಗೂ ನವನಗರ ಬ್ಲಾಕ್ ವತಿಯಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ನಡಿಗೆಗೆ ಇಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಚಾಲನೆ ನೀಡಿದ ಅವರು ಬೆಲೆ ಏರಿಕೆ, ನಿರುದ್ಯೋಗ ತಾಂಡವಾಡುತ್ತಿವೆ ಆದರೆ ದೇಶದ ಅಭಿವೃದ್ಧಿಯ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲವಾಗಿದೆ ಶೇ 40 ಕಮೀಷನ್ ಸರ್ಕಾರವು ಬೇರೆ ಪಕ್ಷದ ಸರ್ಕಾರಗಳನ್ನು ಹಣದ ಆಮಿಷವೊಡ್ಡಿ ರಾಜಕೀಯ ವ್ಯವಸ್ಥೆಯನ್ನೆ ಬಿಜೆಪಿ ಹಾಳು ಮಾಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕ ಪ್ರಸಾದ ಅಬ್ಬಯ್ಯ, ಉಭಯ ಅಧ್ಯಕ್ಷರಾದ ಅಲ್ತಾಫ್ ಹಳ್ಳೂರ, ಅನಿಲಕುಮಾರ ಪಾಟೀಲ, ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಬ್ಲಾಕ್ ಅಧ್ಯಕ್ಷರಾದ ನಾಗರಾಜ ಗೌರಿ, ಬಸವರಾಜ ಕಿತ್ತೂರ, ನಡಿಗೆ ಉಸ್ತುವಾರಿ ಪ್ರಕಾಶ ಕ್ಯಾರಕಟ್ಟಿ, ಕಾಂಗ್ರೆಸ್ ಪಕ್ಷದ ಮಾದ್ಯಮ ವಿಶ್ಲೇಷಕರಾದ ಪಿ.ಎಚ್.ನೀರಲಕೇರಿ, ಸದಾನಂದ ಡಂಗನವರ, ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪುರಿ, ಆನಂದ ಜಾಧವ, ಬಸವರಾಜ ಮಲಕಾರಿ, ಪಾಲಿಕೆ ಸದಸ್ಯರಾದ ಡಾ.ಮಯೂರ ಮೋರೆ, ಶಂಭು ಸಾಲಿಮನಿ, ದೀಪಾ ಗೌರಿ, ಬಸವರಾಜ ಗುರಿಕಾರ, ವಸಂತ ಅರ್ಕಾಚಾರ, ಮಯತ್ತುರಾಜ ಮಾಕಡವಾಲೆ ಸೇರಿದಂತೆ ಪಾಲಿಕೆ ಸದಸ್ಯರು, ವಿವಿಧ ಘಟಕದ ಪದಾಧಿಕಾರಿಗಳು, ನೂರಾರು ಕಾರ್ಯಕರ್ತರು ಪಕ್ಷಾತೀತ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ವಿವಿಧ ಮುಖಂಡರುಗಳು ಮಾತನಾಡಿ, ಸರ್ವ ಜನಾಂಗದವರುನ್ನು ಸಮಾನತೆಯಿಂದ ಕಂಡ ಈ ನಾಡಿನಲ್ಲಿ ಸಮಾಜದ ಸ್ವಾಸ್ಥವನ್ನು ಕೆಡಿಸುವ ಹಾಗೂ ಧರ್ಮಗಳ ನಡುವೆ ವಿಷ ಬೀಜವನ್ನು ಬಿತ್ತುವ ರಾಜಕೀಯ ಪಕ್ಷಕ್ಕೆ ಜನರು ತಕ್ಕ ಪಾಠ ಕಲಿಸಬೇಕು ಎಂದರು.

ಧಾರವಾಡದ ಕೆ ಸಿ ಸಿ ಬ್ಯಾಂಕ ಹತ್ತಿರ ಸುಭಾಷ್ ರಸ್ತೆಯಿಂದ, ವಿವೇಕಾನಂದ ಸರ್ಕಲ್, ಟಿಕಾರೇ ರೋಡ್, ಲೈನ್ ಬಜಾರ್, ಸಂಗಮ ಸರ್ಕಲ್, ಎನ್ ಟಿ ಟಿ ಎಫ್, ಟೋಲ್ ನಾಕಾ, ಗಾಂಧಿನಗರ ಸರ್ಕಲ್, ನವಲೂರ್ ರಸ್ತೆ ಮೂಲಕ ಸತ್ತೂರ್ ವರೆಗೆ ಪಕ್ಷಾತೀತ ಸ್ವಾತಂತ್ರ ನಡಿಗೆ ಬೃಹತ್ ಜನಜಾಗ್ರತಿ ಪಾದಯಾತ್ರೆ ನಡೆಯಿತು.

 

administrator

Related Articles

Leave a Reply

Your email address will not be published. Required fields are marked *