ಹುಬ್ಬಳ್ಳಿ-ಧಾರವಾಡ ಸುದ್ದಿ

ಮತಕೇತ್ರ 71ರಲ್ಲಿ ಬೃಹತ್ ತಿರಂಗಾ ಯಾತ್ರೆ ಯಶಸ್ವಿ

9ವಾರ್ಡ್‌ನಲ್ಲಿ ನಡೆದ ಏಕತೆಗಾಗಿ ನಡಿಗೆ ಜಾಥಾಕ್ಕೆ ಇಸ್ಮಾಯಿಲ್ ತಮಟಗಾರ ಚಾಲನೆ

ಧಾರವಾಡ: ಕಾಂಗ್ರೆಸ್ ಪಕ್ಷದ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಗರದಲ್ಲಿ ಬೃಹತ್ ಏಕತೆಗಾಗಿ ನಡಿಗೆ ಮತ್ತು ತಿರಂಗಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಧಾರವಾಡ-71 ಕ್ಷೇತ್ರದ ವಾರ್ಡ್‌ಗಳಲ್ಲಿ ಹಮ್ಮಿಕೊಂಡಿದ್ದ ಏಕತೆಗಾಗಿ ನಡಿಗೆ ಹಾಗೂ ತಿರಂಗಾ ಯಾತ್ರೆಗೆ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ
ಚಾಲನೆ ನೀಡಿದರು.


ನಗರದ ಕಾಮನಕಟ್ಟಿಯಿಂದ ಹಲವಾರು ಗಣ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಪಾದಯಾತ್ರೆಯು ನಗರೇಶ್ವರ ದೇವಸ್ಥಾನ, ಹೆಬ್ಬಳ್ಳಿ ಅಗಸಿ, ಮದಿಹಾಳ, ಮುರುಘಾಮಠದ ಕಮಲಾಪೂರ, ಮಾಳಾಪೂರ, ಮೆಹಬೂಬ ನಗರ ಮೂಲಕ ಸಾಯಿ ಕೊಪ್ಪದಕೇರಿ ಶಿವಾಲಯದ ಬಳಿ ಮುಕ್ತಯ ವಾಯಿತು.


ಕಾಂಗ್ರೆಸ್ ಮುಖಂಡರಾದ ದೀಪಕ ಚಿಂಚೋರೆ, ಬಸವರಾಜ ಕಿತ್ತೂರ, ಪಾಲಿಕೆ ಸದಸ್ಯ ಡಾ.ಮಯೂರ ಮೋರೆ, ಶಂಭುಗೌಡ ಸಾಲಮನಿ, ಬಾಬಾಜಾನ ಮುಧೋಳ, ಸ್ವಾತಿ ಮಳಗಿ, ಆನಂದ ಜಾಧವ, ಹೇಮಂತ ಗುರ್ಲಹೊಸೂರ, ಅಂಜುಮನ್ ಅಧ್ಯಕ್ಷ ಇಕ್ಬಾಲ್ ಜಮಾದಾರ, ಕಾರ್ಯದರ್ಶಿ ನಜೀರಹುಸೇನ
ಮನಿಯಾರ, ನಜೀರಅಹ್ಮದ ಬಳಬಟ್ಟಿ, ತುಳಸಪ್ಪ ಪೂಜಾರ, ಸಮೀರ ಪಾಗೆ, ಅಜಗರ ಮುಲ್ಲಾ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

 

administrator

Related Articles

Leave a Reply

Your email address will not be published. Required fields are marked *