ಹುಬ್ಬಳ್ಳಿ-ಧಾರವಾಡ ಸುದ್ದಿ

ಪಾಲಿಕೆಯ ಆವರಣದಲ್ಲಿ ಬಿರಿಯಾನಿ ಘಮ ಘಮ!

ವಿಪಕ್ಷ ನಾಯಕರ ಕಚೇರಿ ಉದ್ಘಾಟನೆ

ಹುಬ್ಬಳ್ಳಿ : ಹುಬ್ಬಳ್ಳಿ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿಂದು ವಿಪಕ್ಷ ನಾಂiಕ ದೊರೆರಾಜ ಮಣಿಕುಂಟ್ಲ ಅವರ ನವೀಕೃತ ಕಚೇರಿಯನ್ನು ಶಾಸಕ ಪ್ರಸಾದ ಅಬ್ಬಯ್ಯ ಇಂದು ಉದ್ಘಾಟಿಸಿದರು.


ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ಮೇಯರ್ ಈರೇಶ ಅಂಚಟಗೇರಿ, ಸ್ವರ್ಣ ಸಮೂಹದ ಮುಖ್ಯಸ್ಥ ಡಾ.ಚಿಗರುಪಾಟಿ ವಿಎಸ್‌ವಿ ಪ್ರಸಾದ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರಸಮಲ್ ಜೈನ್, ಪಾಲಿಕೆ ಸಭಾನಾಯಕ ತಿಪ್ಪಣ್ಣ ಮಜ್ಜಗಿ, ಸದಸ್ಯರಾದ ನಿರಂಜನ ಹಿರೇಮಠ, ಮಾಜಿ ಸದಸ್ಯ ಮೋಹನ ಹಿರೇಮನಿ ಮುಂತಾದವರು ಕಚೇರಿಗೆ ತೆರಳಿ ಶುಭಾಶಯ ಕೋರಿದರು.


ಬಿರಿಯಾನಿ ಊಟ : ಕಚೇರಿ ಉದ್ಘಾಟನೆ ಹಿನ್ನೆಲೆಯಲ್ಲಿ ಪಾಲಿಕೆ ಅಂಗಳದಲ್ಲಿ ಮುಖ್ಯ ಕಟ್ಟಡದ ಹಿಂಬಾಗದಲ್ಲಿ ಅಲ್ಲಿಯೇ ಬಿಸಿ ಬಿಸಿ ಬಿರಿಯಾನಿ ಊಟ ಸಿದ್ದ ಪಡಿಸಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ನವೀಕೃತ ಕಚೇರಿ ಸಮಾರಂಭದಲ್ಲಿ ಪಾಲ್ಗೊಂಡ ನೂರಾರು ಜನರು ಬಿರಿಯಾನಿ ಊಟ ಸವಿದರು.

ಪಾಲಿಕೆಯ ಕೇಂದ್ರ ಕಚೇರಿಯಲ್ಲಿಂದು ವಿಪಕ್ಷ ನಾಂiಕ ದೊರೆರಾಜ ಮಣಿಕುಂಟ್ಲ ಅವರ ನವೀಕೃತ ಕಚೇರಿಯ ಉದ್ಘಾಟನೆ ವೇಳೆ ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ, ಶಾಸಕ ಪ್ರಸಾದ ಅಬ್ಬಯ್ಯ, ಮೇಯರ್ ಈರೇಶ ಅಂಚಟಗೇರಿ, ಡಾ.ಚಿಗರುಪಾಟಿ ವಿಎಸ್‌ವಿ ಪ್ರಸಾದ, ಪಾರಸಮಲ್ ಜೈನ್, ತಿಪ್ಪಣ್ಣ ಮಜ್ಜಗಿ, ನಿರಂಜನ ಹಿರೇಮಠ ಇತರರಿದ್ದರು.

administrator

Related Articles

Leave a Reply

Your email address will not be published. Required fields are marked *