ಹುಬ್ಬಳ್ಳಿ-ಧಾರವಾಡ ಸುದ್ದಿ

ಶಾಸಕ ಬೆಲ್ಲದ ಮಾತಿಗೆ ಮರುಳಾಗಬೇಡಿ: ಹುಣಸೀಮರದ

ಧಾರವಾಡ : ಪಶ್ಚಿಮ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗುರುರಾಜ ಹುಣಸಿಮರದ ಇವರು ಗಾಂಧಿನಗರ, ಮಸಾಲಗಾರ ಓಣಿ, ಕರ್ಪಾಲಿನ ಕಂಪೌಂಡ್, ನುಗ್ಗಿಕೇರಿ ಹಾಗೂ ಕೆಲಗೇರಿ ಗ್ರಾಮದಲ್ಲಿ ಭಾರಿ ತುರುಸಿನಿಂದ ನಡೆಯಿತು.
ಈ ಸಂದರ್ಭದಲ್ಲಿ ಅಭ್ಯರ್ಥಿ ಗುರುರಾಜ ಹುಣಶಿಮರದ ಮಾತನಾಡಿ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಅಭಿವೃದ್ದಿಯೇ ನನ್ನ ಗುರಿ. ಸುಳ್ಳು ಹೇಳುವ ಬಿಜೆಪಿ ಶಾಸಕರ ಹೇಳಿಕೆಗೆ ಜನ ಮೋಸ ಹೋಗಬೇಡಿ ಎಂದರು.


ಧಾರವಾಡದಲ್ಲಿ ಚಂದ್ರಕಾಂತ ಬೆಲ್ಲದ ನಗರದಲ್ಲಿ ಮನೆ ಹಂಚಿಕೆ ಮಾಡುತ್ತೇನೆ ಅಂದು ಈ ನಗರಕ್ಕೆ ಹಸರು ಇಟ್ಟವರು ತಾವೆ ಸರಕಾರದ ಹಣ ದುರುಪಯೋಗ ಮಾಡಿಕೊಂಡ ಶಾಸಕರು ಅಧಿಕಾರ ದುರ್ಬಳಕೆ ಮಾಡಿದ್ದಾರೆಂದರು.
ಕಾಂಗ್ರೇಸ್ ಮತ್ತು ಬಿಜೆಪಿ ಅವರು ಹಣಕ್ಕೆ ಮೊಸ ಹೋಗಬೇಡಿ.ಹಣದ ಪ್ರಭಾವ ಬಳಸಿ ಗೆಲ್ಲಬೇಕು ಎಂಬ ಹಂಬಲ ಬಿಜೆಪಿ, ಕಾಂಗ್ರೆಸ್ ಪಕ್ಷ ಹೊಂದಿವೆ. ಅದಕ್ಕೆ ಮರುಳಾಗಬೇಡಿ ಎಂದರು.


ಮಾಜಿ ಮಹಾನಗರ ಸಭೆ ಸದಸ್ಯರಾದ ವಿಜಯಲಕ್ಷ್ಮೀ ಲೂತಿಮಠ, ಪಾಲಿಕೆ ಸದಸ್ಯೆ ಲಕ್ಷ್ಮೀ ಹಿಂಡಸಗೇರಿ, ಬಾಷಾ ಮುದಗಲ್, ಮಂಜುನಾಥ ಆರೇರ, ಮುಖಂಡರಾದ ಮಲ್ಲಿಕಾರ್ಜುನ ಹಳೆಮನಿ, ನಿಯಾಜ ನಿಪ್ಪಾಣಿ, ಪೂಜಾ ಮೇಣಸಿನಕಾಯಿ, ಮಹದೇವಿ ಪಾಟೀಲ, ನಿಜಾಮ ಬಾಮನಿ, ಮಹದೇವ ಕಾಂಬಳೆ ಇದ್ದರು.

 

administrator

Related Articles

Leave a Reply

Your email address will not be published. Required fields are marked *