ಹುಬ್ಬಳ್ಳಿ-ಧಾರವಾಡ ಸುದ್ದಿ

ತಮಗೇ ಬಿಜೆಪಿ ಟಿಕೆಟ್ : ಚಿಕ್ಕನಗೌಡರ

ವರಿಷ್ಠರಿಂದ ಬಿ ಫಾರಂ ಭರವಸೆ

ಕುಂದಗೋಳ: ಈಗಾಗಲೇ ಏಳು ಬಾರಿ ವಿಧಾನಸಭೆಗೆ ಸ್ಪರ್ಧಿಸಿ ಮೂರು ಗೆಲುವು ಸಾಧಿಸಿದ್ದು, ನಾಲ್ಕು ಬಾರಿ ಎರಡನೇ ಸ್ಥಾನದಲ್ಲಿ ಇದ್ದು ಮುಂದಿನ ವಿಧಾನ ಸಭೆ ಚುನಾವಣೆಯಲ್ಲೂ ತಾವು ಕುಂದಗೋಳ ವಿಧಾನಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು ತಮ್ಮನ್ನೆ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ವಿಶ್ವಾಸವಿದೆ ಎಂದು ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ ಹೇಳಿದರು.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಘಟಗಿ ವಿಧಾನಸಭೆ ಕ್ಷೇತ್ರದಿಂದ ಎರಡು ಭಾರಿ ಕುಂದಗೋಳ ಮತಕ್ಷೇತ್ರದಿಂದ ಒಂದು ಭಾರಿ ಶಾಸಕ ಹೀಗೆ ಏಳು ಭಾರಿ ಸ್ಪರ್ದಿಸಿರುವ ಪೈಕಿ ಮೂರು ಭಾರಿ ಶಾಸಕನಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವದು ಕ್ಷೇತ್ರದ ಜನತೆಗೆ ಗೊತ್ತಿರುವ ಸಂಗತಿಯಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ಸಮಸ್ಯೆಗಳಿದ್ದರೂ ಪಕ್ಷದ ಯಾವ ಸಭೆ ಸಮಾರಂಭ ಗಳಲ್ಲಿ ಕೂಡ ಗೈರಾಗಿ ಉಳಿದಿಲ್ಲ. ಆದರೂ ಕೂಡ ಕೆಲವರು ತಮಗೆ ಭಾರಿ ಪಕ್ಷ ಬಿ ಫಾರ್ಮ ಕೊಡುವುದಿಲ್ಲ. ಚುನಾವಣೆಗೆ ಚಿಕ್ಕನಗೌಡ್ರ ಸ್ಪರ್ಧಿಸುವದಿಲ್ಲ ಅಂತ ಅಪಪ್ರಚಾರ ಮಾಡುತ್ತಿದ್ದಾರೆ ಅದಕ್ಕೆ ಯಾರೂ ಕಿವಿಗೊಡಬಾರದು ಎಂದು ಹೇಳಿದರು.

ಮತಕ್ಷೇತ್ರದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಕಾರ್ಯಕರ್ತರಿದ್ದಾರೆ. ಬಂಧು ಬಾಂಧವರಿದ್ದಾರೆ. ಪ್ರತಿನಿತ್ಯ ಅವರ ಸಂಪರ್ಕದಲ್ಲಿದ್ದೇನೆ. ಅವರ ಕಷ್ಟ ದುಖಗಳಲ್ಲಿ ಭಾಗಿಯಾಗುತ್ತಿದ್ದೇನೆ ನನಗೂ ಕೂಡ ಪಕ್ಷದ ವರಿಷ್ಠರು ಭಿ.ಪಾರ್ಮ ಕೊಡುವ ಭರವಸೆ ಕೊಟ್ಟಿದ್ದಾರೆ ಯಾವುದೇ ಕಾರಣಕ್ಕೂ ನನ್ನ ಕಾರ್ಯಕರ್ತರು ಅಭಿಮಾನಿಗಳು ಧೃತಿಗೆಡಬೇಕಿಲ್ಲ. ಚುನಾವಣೆ ಸಮಯ ನಿಗದಿಯಾಗಲಿ ಅಲ್ಲಿಯ ವರಿಗೂ ನಾವೆಲ್ಲ ಪಕ್ಷವನ್ನು ಬೂತ್‌ಮಟ್ಟದಲ್ಲಿ ಇನ್ನಷ್ಟು ಸಂಘಟಿಸಿ ಪುನಃ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮಾಡಲು ಯತ್ನಿಸಲು ಪ್ರಯತ್ನಿಸ ಬೇಕೆಂದರು.

 

administrator

Related Articles

Leave a Reply

Your email address will not be published. Required fields are marked *