ಹುಬ್ಬಳ್ಳಿ-ಧಾರವಾಡ ಸುದ್ದಿ

ಜೆಡಿಎಸ್ ಜನತೆಯ ಆಶಾಕಿರಣ

ಜನಸಾಮಾನ್ಯರಿಗೆ ಪಂಚರತ್ನ ವರದಾನ: ಗುರುರಾಜ್ ಹುಣಸಿಮರದ

ಧಾರವಾಡ: ಧಾರವಾಡ 74 ಪಶ್ಚಿಮ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗುರುರಾಜ್ ಹುಣಸಿಮರದ ಅವರು ಗಾಮನಗಟ್ಟಿ ಗ್ರಾಮದಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಪ್ರಚಾರ ವೇಳೆ ಮಾತನಾಡಿದ ಹುಣಸಿಮರದ ಅವರು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಜೆಡಿಎಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಎರಡೂ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಅಭಿವೃದ್ಧಿಯ ಪ್ರಾಮಾಣಿಕ ಕಳಕಳಿಯಿಲ್ಲ. ಹಾಗಾಗಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ರಾಜ್ಯದ ಜನರ ಆಶಾಕಿರಣವಾಗಿದ್ದು, ತೆನೆ ಹೊತ್ತ ಮಹಿಳೆಗೆ ಮತ ಹಾಕಬೇಕೆಂದು ಹೇಳಿದರು.

ಮುಖಂಡರಾದ ವಸಂತ್ ಬಿಳೆಯಲಿ, ಭೀಮರಾಯ ಗುಡೇನಕಟ್ಟಿ, ನಾಗರಾಜ ಗುಡದರಿ, ಅಪ್ಪಣ್ಣ ದರಣಿ, ಬಸಣ್ಣ ಮನಗುಂಡಿ, ಶಿವು ಅವರಾದಿ ಸೇರಿದಂತೆ ಅನೇಕರಿದ್ದರು.

ಜನಸಾಮಾನ್ಯರಿಗೆ ಪಂಚರತ್ನ ವರದಾನ

ಧಾರವಾಡ: ಪಶ್ಚಿಮ ಕ್ಷೇತ್ರದ ಜಾತ್ಯಾತೀತ ಜನತಾದಳ ಪಕ್ಷದ ಅಭ್ಯರ್ಥಿಯಾದ ಗುರುರಾಜ ಹುಣಸಿಮರದ ಅವರು ಇಲ್ಲಿನ ಗಣೇಶನಗರದಲ್ಲಿ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ನಡೆಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಂಚರತ್ನ ಯೋಜನೆ ಜನ ಸಾಮಾನ್ಯರಿಗೆ ವರದಾನವಾಗಲಿದೆ. ಹಾಗಾಗಿ ಆಶೀರ್ವದಿಸುವ ಮೂಲಕ ತಮಗೆ ಅವಕಾಶ ನೀಡಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ವಸಂತ ಬೆಳೆಯಲಿ,ಭೀಮರಾಯ ಗುಡೇನಕಟ್ಟಿ, ಅಪ್ಪಣ್ಣ ಧರಣಿ, ಗಿರೀಶ್ ಪೂಜಾರ್, ಜೆಡಿಎಸ್ ಧಾರವಾಡ ಜಿಲ್ಲಾ ವಕ್ತಾರ ಶರಣಪ್ಪ ಬಿರಾದಾರ್ ಜೆಡಿಎಸ್ ಮುಖಂಡರು ಮುಂತಾದ ಪ್ರಮುಖ ನಾಯಕರು ಭಾಗವಹಿಸಿದ್ದರು

 

administrator

Related Articles

Leave a Reply

Your email address will not be published. Required fields are marked *