ಹುಬ್ಬಳ್ಳಿ-ಧಾರವಾಡ ಸುದ್ದಿ

ಭೂವಿವಾದ: ಪೇಡೆನಗರಿಯಲ್ಲಿ ಫೈರಿಂಗ್

ಮುಂಬೈ ಮೂಲದ ಅಗರವಾಲ್ ವಶಕ್ಕೆ

ಧಾರವಾಡ: ನಿವೇಶನ ಸಂಬಂಧ ಉಂಟಾದ ಕಲಹದಲ್ಲಿ ವ್ಯಕ್ತಿಯೋರ್ವ ಗುಂಡು ಹಾರಿಸಿದ ಘಟನೆ ಇಲ್ಲಿನ ಅತ್ತಿಕೊಳ್ಳ ಪ್ರದೇಶದಲ್ಲಿ ಇಂದು ಮುಂಜಾನೆ ನಡೆದಿದೆ.
ಮುಂಬೈ ಮೂಲದ ಸುಶಾಂತ ಅಗರವಾಲ ಗುಂಡು ಹಾರಿಸಿದ ವ್ಯಕ್ತಿ ಎಂದು ಗೊತ್ತಾಗಿದೆ.


ಮುಂಬೈ ಮೂಲದ ಸುಶಾಂತ ಅಗರವಾಲ್‌ನದ್ದು ಎನ್ನಲಾದ ಅತ್ತಿಕೊಳ್ಳ ಬಡಾವಣೆ ಯಲ್ಲಿನ ನಿವೇಶನವನ್ನು ಅತಿಕ್ರಮಣ ಮಾಡಿಕೊಂಡಿದ್ದರ ಸ್ಥಳೀಯರನ್ನು ಹೆದರಿಸಲು ಸುಶಾಂತ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾನೆ.


ಸುಶಾಂತನ ಜಾಗೆಯನ್ನು ಸ್ಥಳೀಯ ಕೆಲವರು ಮಾಡಿದ್ದ ಅತಿಕ್ರಮಣ ತೆರವು ಗೊಳಿಸುವ ಹಿನ್ನೆಲೆಯಲ್ಲಿ ವಿವಾದ ನಡೆದಿದೆ. ಘಟನೆ ಬಳಿಕ ಸ್ಥಳಕ್ಕೆ ಆಗಮಿಸಿದ ವಿದ್ಯಾಗಿರಿ ಠಾಣೆ ಪೊಲೀಸರು ಸುಶಾಂತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ಹಂತದಲ್ಲಿ ತಿಳಿದು ಬಂದಿದೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಎಂ. ರಾಜೀವ ಮಾಧ್ಯಮದವರಿಗೆ ತಿಳಿಸಿದರು.

administrator

Related Articles

Leave a Reply

Your email address will not be published. Required fields are marked *