ಹುಬ್ಬಳ್ಳಿ-ಧಾರವಾಡ ಸುದ್ದಿ
ಸ್ಥಳೀಯರಿಂದ ಹಣತೆ ಖರೀದಿಗೆ ಮನವಿ

ಸ್ಥಳೀಯರಿಂದ ಹಣತೆ ಖರೀದಿಗೆ ಮನವಿ

ರಜತ್ ಉಳ್ಳಾಗಡ್ಡಿಮಠ ಅಭಿಯಾನಕ್ಕೆ ಆರ್.ಕೆ.ಪಾಟೀಲ ಬೆಂಬಲ

ಧಾರವಾಡ: ಬೆಳಕಿನ ಹಬ್ಬ ದೀಪಾವಳಿಗೆ ಹುಬ್ಬಳ್ಳಿ-ಧಾರವಾಡ ಸಜ್ಜಾಗುತ್ತಿದೆ. ಈ ಹಬ್ಬಕ್ಕೆ ಮೆರಗು ನೀಡುವ ಪನತಿಯನ್ನು ಸ್ಥಳೀಯವಾಗಿಯೇ ಖರೀದಿಸಿ. ಈ ವೇಳೆ ಸಣ್ಣ ವ್ಯಾಪಾರಿಗಳಿಗೆ ನಿಮ್ಮ ಸಹಾಯದ ಅಗತ್ಯವಿದೆ ಎಂದು ಕಾಂಗ್ರೆಸ್ ಮುಖಂಡ ಆರ್.ಕೆ.ಪಾಟೀಲ ಮನವಿ ಮಾಡಿದ್ದಾರೆ.


ದೊಡ್ಡ ಅಂಗಡಿಗಳಿಗೆ ಹೋಗಿ ಖರೀದಿ ಮಾಡೋ ಬದಲು ನಿಮ್ಮ ಮನೆಯ ಹತ್ತಿರ ಇವರ ಅಂಗಡಿಗೆ ಹೋಗಿ ಹೊಸ ಬಟ್ಟೆ, ದೀಪ, ಆಕಾಶ್ ಬುಟ್ಟಿ, ಹಣ್ಣುಗಳು, ಹೂಗಳು, ತರಕಾರಿಗಳು ಖರೀದಿಸಿ. ಆನ್‌ಲೈನ್ ಅಥವಾ ಸೂಪರ್ ಮಾರ್ಕೆಟ್ ಬದಲಿಗೆ ಸ್ಥಳೀಯ ದಿನಸಿ ಅಂಗಡಿಗಳಲ್ಲಿ ದಿನಸಿ ವಸ್ತುಗಳನ್ನು ಖರೀದಿಸಿ. ಸಣ್ಣ ವ್ಯಾಪಾರಿಗಳು ಸಂಕಷ್ಟಕ್ಕೆ ಒಳಗಾಗಿ ತುತ್ತುನ ಚೀಲಕ್ಕೂ ಒದಾಡುತ್ತಾರೆ. ಹೀಗಾಗಿ ಅಕ್ಕಪಕ್ಕದ ಕಿರಾಣಿ ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡಿ. ಇದರಿಂದ ಅವರ ಬದುಕಿಗೆ ಸಹಾಯ ಆಗುತ್ತದೆ ಎಂದು ತಿಳಿಸಿದ್ದಾರೆ.


ಈಗಾಗಲೇ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ರಜತ್ ಉಳ್ಳಾಗಡ್ಡಿಮಠ ಫೌಂಡೇಶನ್ ಮೂಲಕ ಸ್ಥಳೀಯರಿಂದ ಹಣತೆ ಖರೀದಿ ಅಭಿಯಾನ ಆರಂಭವಾಗಿದೆ. ಇದಕ್ಕೆ ತಮ್ಮ ಸಂಪೂರ್ಣ ಬೆಂಬಲವೂ ಇದೆ ಎಂದು ತಿಳಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *