ಹುಬ್ಬಳ್ಳಿ-ಧಾರವಾಡ ಸುದ್ದಿ

ಪಕ್ಷೇತರನಾಗಿ ಮಲಕಾರಿ ಸೆಡ್ಡು

ಹುಬ್ಬಳ್ಳಿ : ಧಾರವಾಡ ಪಶ್ಚಿಮ 74 ವಿಧಾನಸಭಾ ಕ್ಷೇತ್ರದ ಟಿಕೆಟ್‌ನ್ನು ಕಾಂಗ್ರೆಸ್ ಮಾಜಿ ಉಪ ಮೇಯರ್ ದೀಪಕ ಚಿಂಚೋರೆಯವರಿಗೆ ಅಂತಿಮಗೊಳಿಸಿದ್ದು ಆಕಾಂಕ್ಷಿಯಾಗಿದ್ದ ರಾಣಿ ಚೆನ್ನಮ್ಮ ಬ್ಲಾಕ್ ಮಾಜಿ ಅಧ್ಯಕ್ಷ, ಹಿಂದುಳಿದ ಸಮುದಾಯದ ಪ್ರಭಾವಿ ಮುಖಂಡ ಬಸವರಾಜ ಮಲಕಾರಿ ಪಕ್ಷೇತರ ಅಭ್ಯರ್ಥಿಯಾಗಿ ಸೆಡ್ಡು ಹೊಡೆದಿದ್ದಾರೆ.


ತಮ್ಮ ನೂರಾರು ಬೆಂಬಲಿಗರೊಂದಿಗೆ ಬುಧವಾರ ನಾಮಪತ್ರ ಸಲ್ಲಿಸಿದ ಅವರು ಪಕ್ಷ ಕಾರ್ಯವನ್ನು ಕಳೆದ ಅನೇಕ ವರ್ಷಗಳಿಂದ ಮಾಡಿಕೊಂಡು ಬಂದ ನನಗೆ ಟಿಕೆಟ್ ಧಕ್ಕುವ ವಿಶ್ವಾಸವಿತ್ತು. ಆದರೆ ಕೈ ತಪ್ಪಿದ್ದು ಹಾಗಾಗಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದು ಎಲ್ಲ ಬೆಂಬಲಿಗರೂ ಯಾವುದೇ ಕಾರಣಕ್ಕೂ ಹಿಂದಕ್ಕೆ ತೆಗೆದುಕೊಳ್ಳದಂತೆ ಆಗ್ರಹ ಮಾಡುತ್ತಿದ್ದು ಅಲ್ಲದೇ ಕ್ಷೇತ್ರದಾದ್ಯಂತ ಅಭಿಮಾನಿಗಳಿದ್ದು ಕಣದಲ್ಲಿ ಉಳಿಯುವುದಾಗಿ ಹೇಳಿದ್ದಾರೆ.


ಶಾಸಕ ಬೆಲ್ಲದ ಅವರ ಜನವಿರೋಧಿ ನೀತಿಯಿಂದಾಗಿ ಕ್ಷೇತ್ರದ ಜನತೆ ಬೇಸತ್ತಿದ್ದು ಜನತೆ ಬದಲಾವಣೆ ಬಯಸಿದ್ದಾರೆಂದು ಅವರು ಹೇಳಿದ್ದಾರೆ. ಈ ಚುನಾವಣೆ ಮಲಕಾರಿ ಹಾಗೂ ಬೆಲ್ಲದ ವಿರುದ್ಧ ನಡೆಯಲಿದೆ ಎಂದು ತಿಳಿಸಿದರು.

administrator

Related Articles

Leave a Reply

Your email address will not be published. Required fields are marked *