ಹುಬ್ಬಳ್ಳಿ-ಧಾರವಾಡ ಸುದ್ದಿ

ಕಾಂಗ್ರೆಸ್‌ನಿಂದ ರಾಷ್ಟ್ರಧ್ವಜ ವಾಪ್ಸಿ ಅಭಿಯಾನ

ಪಾಲಿಕೆ ವಿರುದ್ಧ ಪ್ರಕರಣ ದಾಖಲಿಸಲು ಚಿಂತನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿತರಿಸಿದ ರಾಷ್ಟ್ರಧ್ವಜ ಗಳಲ್ಲಿ ರಾಷ್ಟ್ರಧ್ವಜ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಕಾರಣ ಕಾಂಗ್ರೆಸ್ ಪಕ್ಷದಿಂದ ರಾಷ್ಟ್ರಧ್ವಜ ವಾಪ್ಸಿ ಅಭಿಯಾನದ ಚಿಂತನೆ ನಡೆದಿದೆ ಎಂದು ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೊರೆ ಹಾಗೂ ರಜತ ಉಳ್ಳಾಗಡ್ಡಿಮಠ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.


ಹು-ಧಾ ಮಹಾನಗರ ಪಾಲಿಕೆ ಪ್ರತಿ ಸದಸ್ಯರಿಗೆ 1000 ಧ್ವಜಗಳನ್ನು ವಿತರಣೆ ಮಾಡಿದ್ದು, ಇದರಲ್ಲಿ ಶೇ 70ರಷ್ಟು ಧ್ವಜಗಳು ನಿಯಮ ಉಲ್ಲಂಘಿಸಿವೆ. ನಿಯಮದ ಪ್ರಕಾರ ಧ್ವಜಗಳನ್ನು 9 ಅಳತೆಯಂತೆ ಮಾಡಬಹುದಿದ್ದು, ಆದರೆ ಅದ್ಯಾವ ನಿಯಮ ಪಾಲನೆ ಕಂಡುಬರುತ್ತಿಲ್ಲ ಎಂದು ದೂರಿದರು.
ಇದೀಗ ಹಂಚಿಕೆಯಾಗಿರುವ ಧ್ವಜದಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣಗಳು ಸಮ ಪ್ರಮಾಣದಲ್ಲಿಲ್ಲ, ಅಶೋಕ ಚಕ್ರ ಧ್ವಜದ ನಡುವೆ ಇರದೇ ಪಕ್ಕದಲ್ಲಿವೆ. ಕೆಲವು ಧ್ವಜಗಳು ಬಣ್ಣ ಮಾಸಿವೆ. ಕೆಲವೊಂದು ಹರಿದಿವೆ. ಇಂತಹ ಧ್ವಜ ಗಳನ್ನು ಸಾರ್ವಜನಿಕರಿಗೆ ವಿತರಿಸಲು ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷ ಖಾದಿಯಿಂದ ತಯಾರಿಸಿದ ರಾಷ್ಟ್ರಧ್ವಜಗಳನ್ನು ವಿತರಿಸುವ ಅಭಿಯಾನ ನಡೆಸುತ್ತಿದೆ ಎಂದ ಅವರು, ಪಾಲಿಕೆ ವಿರುದ್ಧ ದೂರು ದಾಖಲಿಸಲು ಚಿಂತನೆ ನಡೆದಿದೆ ಎಂದರು.


ಈಗಾಗಲೇ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಆರ್‌ಎಸ್‌ಎಸ್ ಕಚೇರಿ ಸೇರಿದಂತೆ ಹಲವು ಬಿಜೆಪಿ ನಾಯಕರಿಗೆ ಖಾದಿ ಧ್ವಜ ವಿತರಿಸಿ ಖಾದಿ ಉಳಿಸಿ ಎಂದು ಮನವಿ ಮಾಡಲಾಗಿದೆ. ಅದರಂತೆ ಮುಂದೆಯೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಆಯುಕ್ತರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳಿಗೆ ಖಾದಿ ಬಟ್ಟೆ ನೀಡುವ ಮೂಲಕ ನೂತನ ರಾಷ್ಟ್ರಧ್ವಜ ನೀತಿ ಸಂಹಿತೆಯನ್ನು ವಿರೋಧಿಸುತ್ತೇವೆ ಎಂದು ತಿಳಿಸಿದರು.
ದೇಶದ ಮೂಲೆ ಮೂಲೆಗಳಿಗೆ ಹುಬ್ಬಳ್ಳಿಯ ಬೆಂಗೇರಿ ಹಾಗೂ ಧಾರವಾಡದ ಗರಗದ ಖಾದಿ ಕೇಂದ್ರಗಳಿಂದ ತಯಾರಿಸಿದ ರಾಷ್ಟ್ರಧ್ವಜಗಳನ್ನು ರಫ್ತು ಮಾಡಲಾಗುತ್ತಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿರುವ ರಾಷ್ಟ್ರಧ್ವಜ ನೀತಿ ಸಂಹಿತೆಯಿಂದ ಖಾದಿ ಕೇಂದ್ರಗಳು ಅಳಿವಿನಂಚಿಗೆ ತಲುಪಿವೆ. ಹೀಗಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಖಾದಿ ಗ್ರಾಮೋದ್ಯೋಗ ಸಂಸ್ಥೆ ಉಳಿಸಿನ ಜೊತೆಗೆ ಖಾದಿ ರಾಷ್ಟ್ರಧ್ವಜಗಳಿಗೆ ಉತ್ತೇಜನ ನೀಡುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.

administrator

Related Articles

Leave a Reply

Your email address will not be published. Required fields are marked *