ಹುಬ್ಬಳ್ಳಿ-ಧಾರವಾಡ ಸುದ್ದಿ
ಲಾಡ್ ಫೌಂಡೇಶನ್‌ಗೆ ಸೋಶಿಯಲ್ ಅವಾರ್ಡ್

ಲಾಡ್ ಫೌಂಡೇಶನ್‌ಗೆ ಸೋಶಿಯಲ್ ಅವಾರ್ಡ್

ಜನಪರ ಕಾಳಜಿಗೆ ಸಂದ ಗೌರವ: ಆನಂದ ಕಲಾಲ

ಧಾರವಾಡ: ಸಂತೋಷ್ ಲಾಡ್ ಫೌಂಡೇಶನ್ ನ ಜನಪರ ಕಾಳಜಿಯನ್ನ ಗುರುತಿಸಿ ಖಾಸಗಿ ವಾಹಿನಿಯ ’ನಾರ್ಥ್ ಕರ್ನಾಟಕ ಸೋಶಿಯಲ್ ಅವಾರ್ಡ್’ ನೀಡಿ ಗೌರವಿಸಿದೆ.
ಅವಳಿನಗರ ಮಧ್ಯೆ ಖಾಸಗಿ ಹೊಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಫೌಂಡೇಶನ್‌ನ ಅಧ್ಯಕ್ಷ ಆನಂದ ಕಲಾಲ ಪ್ರಶಸ್ತಿಯನ್ನು ಕೇಂದ್ರ ಸಚಿವರು, ಗಣ್ಯರಿಂದ ಸ್ವೀಕರಿಸಿದ್ದು, ಈ ಎಲ್ಲ ಶ್ರೇಯಸ್ಸು ತಮ್ಮ ನಾಯಕರು, ಮಾಜಿ ಶಾಸಕರಾದ ಸಂತೋಷ್ ಲಾಡ್ ಅವರಿಗೆ ಸಲ್ಲಬೇಕು ಎಂದು ಕಲಾಲ ಹೇಳಿದ್ದಾರೆ.


ಜನರಿಗೆ ಒಳ್ಳೆಯದನ್ನ ಮಾಡ್ಬೇಕು, ಗ್ರಾಮೀಣ ಭಾಗದ ಬಡ ಪ್ರತಿಭಾವಂತ ಮಕ್ಕಳಿಗೆ ಉಜ್ವಲ ಭವಿಷ್ಯ ನೀಡಬೇಕು, ಯಾರೂ ಹಸಿವಿನಿಂದ ಇರಬಾರದು. ಅಲ್ಲದೇ ಕುಗ್ರಾಮಗಳಿಗೂ ಆರೋಗ್ಯ ಸೇವೆ ದೊರೆಯಬೇಕು ಎನ್ನುವುದು ಲಾಡ ಫೌಂಡೇಶನ್ ಆಶಯವಾಗಿದ್ದು ಈ ಕಾಳಜಿ ಗುರುತಿಸಿ ಈ ನಾರ್ಥ ಕರ್ನಾಟಕ ಸೋಶಿಯಲ್ ಅವಾರ್ಡ ಬಂದಿದೆ ಎಂದು ಕಲಾಲ ಅಭಿಪ್ರಾಯಪಡುತ್ತಾರೆ.

administrator

Related Articles

Leave a Reply

Your email address will not be published. Required fields are marked *