ಹುಬ್ಬಳ್ಳಿ-ಧಾರವಾಡ ಸುದ್ದಿ
’ಜೀವಿ’ಗೆ ರಂಗಚಂದ್ರ ಪ್ರಶಸ್ತಿ

’ಜೀವಿ’ಗೆ ರಂಗಚಂದ್ರ ಪ್ರಶಸ್ತಿ

ಹುಬ್ಬಳ್ಳಿ: ನಗರದ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ವತಿಯಿಂದ ಪ್ರತಿವರ್ಷವೂ ಕೊಡಮಾಡುವ 2022ನೇ ಸಾಲಿನ ರಂಗಚಂದ್ರ ಪ್ರಶಸ್ತಿಗೆ ನಟ,ನಿರ್ದೇಶಕ ಹಾಗೂ ರಂಗಭೂಮಿಯಲ್ಲಿ ತಮ್ಮದೆ ಛಾಪು ಮೂಡಿಸಿ ಹುಬ್ಬಳ್ಳಿಯ ಗದಿಗಯ್ಯ ಹಿರೇಮಠ( ಜೀವಿ) ಅವರನ್ನು ಆಯ್ಕೆಮಾಡಲಾಗಿದೆ.
ಈ ಪ್ರಶಸ್ತಿಯನ್ನು ರಂಗಭೂಮಿ, ಸಂಘಟನೆ, ನಟನೆ ನಿರ್ದೇಶನ, ರಂಗ ಸಂಘಟನೆ, ರಂಗಸಾಹಿತ್ಯದ ತೊಡಗಿಕೊಂಡವರಿಗೆ, ಅವರ ಗಣನೀಯ ಸೇವೆಯನ್ನು ಗುರುತಿಸಿ ಖ್ಯಾತ ರಂಗ ನಿರ್ದೇಶಕ ದಿ.ಕೆ.ಜಗುಚಂದ್ರ ಅವರ ಸ್ಮರಣಾರ್ಥ ಈ ಪ್ರಶಸ್ತಿಯನ್ನು ಪ್ರತಿ ವರ್ಷವೂ ಒಬ್ಬ ಸಾಧಕರಿಗೆ ನೀಡಲಾಗುತ್ತಿದೆ.
ಕೆ.ಜಗುಚಂದ್ರ ಅವರ ಸ್ಮರಣೆಯ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಅವರನ್ನು ಗೌರವಿಸಿ ಸನ್ಮಾನಿಸಲಾಗುವುದು ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಮಾರ್ತಾಂಡಪ್ಪ ಎಮ್ ಕತ್ತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

administrator

Related Articles

Leave a Reply

Your email address will not be published. Required fields are marked *