ಹುಬ್ಬಳ್ಳಿ-ಧಾರವಾಡ ಸುದ್ದಿ
ಟಾಕೀಸ್‌ನಲ್ಲೇ ಶೂಟ್ ಔಟ್-ಪ್ರಾಣಾಪಾಯದಿಂದ ಪಾರು

ಟಾಕೀಸ್‌ನಲ್ಲೇ ಶೂಟ್ ಔಟ್-ಪ್ರಾಣಾಪಾಯದಿಂದ ಪಾರು


ಶಿಗ್ಗಾವಿ/ಹುಬ್ಬಳ್ಳಿ: ಇಲ್ಲಿನ ರಾಜೇಶ್ವರಿ ಟಾಕೀಸಿನಲ್ಲಿ ಕನ್ನಡದ ಚಲನಚಿತ್ರ ಮಾರುಕಟ್ಟೆಯ ಮೇರೆ ಮೀರಿ ವಿಶ್ವದಾದ್ಯಂತ ದಿನಕ್ಕೊಂದು ದಾಖಲೆ ಬರೆಯುತ್ತಿರುವ ಕೆಜಿಎಫ್-೨ ಚಿತ್ರ ನೋಡುತ್ತಿದ್ದಾಗಲೇ ಪ್ರೇಕ್ಷಕನೋರ್ವ ಮತ್ತೋರ್ವ ಪ್ರೇಕ್ಷಕನಿಗೆ ಗುಂಡು ಹಾರಿಸಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.
ಗಂಭೀರವಾಗಿ ಗಾಯಗೊಂಡ ವಸಂತಕುಮಾರ ಶಿವಪುರನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಗುಂಡುಗಳನ್ನು ಹೊರಗೆ ತೆಗೆಯಲಾಗಿದೆ.
ವಸಂತಕುಮಾರ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕಿಮ್ಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ 10.30 ರ ಸಮಯದಲ್ಲಿ ರಾಜಶ್ರೀ ಚಿತ್ರಮಂದಿರದಲ್ಲಿ ‘ಕೆಜಿಫ್-2’ ನೋಡುವ ಸಂರ್ದಭದಲ್ಲಿ ಕ್ಷುಲ್ಲಕ ಕಾರಣ ಕ್ಕಾಗಿ ನಡೆದ ಜಗಳ ಗುಂಡು ಹಾರಿಸುವ ಹಂತ ತಲುಪಿದೆ.


ತಾಲೂಕಿನ ಮುಗಳಿ ಗ್ರಾಮದ ವಸಂತಕುಮಾರ ಸಣ್ಣಕಲ್ಲಪ್ಪ ಶಿವಪುರ(28) ಮುಂದಿನ ಕುರ್ಚಿಯ ಮೇಲೆ ಕಾಲು ಹಾಕಿಕೊಂಡು ಚಿತ್ರವನ್ನು ನೋಡುತ್ತಿದ್ದಾಗ ಪಕ್ಕದಲ್ಲಿಯ ವ್ಯಕ್ತಿ ಕಾಲು ತೆಗೆ ಅಂತ ತಿಳಿಸಿದ್ದು ಅದೇ ಮಾತಿಗೆ ಮಾತು ಬೆಳೆದು ಪಕ್ಕದಲ್ಲಿದ್ದ ವ್ಯಕ್ತಿಯು ನಿನ್ನನ್ನು ನೋಡಿಕೊಳ್ಳುತ್ತೆನೆ ಎಂದು ಹೊರಬಂದು ಸ್ವಲ್ಪ ಸಮಯದ ನಂತರ ಮತ್ತೆ ಚಿತ್ರಮಂದಿರದ ಒಳಬಂದು ತನ್ನ ರಿವಾಲ್ವಾರಿನಿಂದ ವಸಂತಕುಮಾರನಿಗೆ 3 ಗುಂಡುಗಳನ್ನು ಹಾರಿಸಿ ಪರಾರಿಯಾದ್ದಾನೆ. ಎರಡು ಗುಂಡುಗಳು ನೇರವಾಗಿ ಹೊಟ್ಟೆಗೆ ತಗಲಿದ್ದು ,ಆರೋಪಿಯ ಮೂರನೇ ಗುಂಡು ಗುರಿ ತಪ್ಪಿ ಹೋಗಿದೆ.
ತೀವ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದವನನ್ನು ತಕ್ಷಣ ತಾಲೂಕಾ ಆಸ್ಪತ್ರೆಗೆ ದಾಖಲಿಸಿ ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಲಾಯಿತು.
ಗುಂಡು ಹಾರಿಸಿ ಆರೋಪಿ ಪರಾರಿಯಾಗಿದ್ದಾನೆ, ಆರೋಪಿ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಘಟನಾ ಸ್ಥಳಕ್ಕೆ ಹಾವೇರಿ ಎಸ್ ಪಿ ಹನುಮಂತರಾಯ ಭೇಟಿ ನೀಡಿದ್ದು ಆತನ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

 

administrator

Related Articles

Leave a Reply

Your email address will not be published. Required fields are marked *