ಹುಬ್ಬಳ್ಳಿ-ಧಾರವಾಡ ಸುದ್ದಿ
ಜಗದೀಶ ಶೆಟ್ಟರ ವಿರುದ್ಧ ಅಸಮಾಧಾನ: ಶಂಕ್ರಣ್ಣ ಮುನವಳ್ಳಿ ನಾಮಪತ್ರ?

ಜಗದೀಶ ಶೆಟ್ಟರ ವಿರುದ್ಧ ಅಸಮಾಧಾನ: ಶಂಕ್ರಣ್ಣ ಮುನವಳ್ಳಿ ನಾಮಪತ್ರ?

ಹುಬ್ಬಳ್ಳಿ: ಧಾರವಾಡ ಸ್ಥಳೀಯ ಸಂಸ್ಥೆಗಳ ಸ್ಥಾನದಿಂದ ರಾಜ್ಯ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಲು ತಾವು ಸಿದ್ಧವಾಗಿ ನಾಮಪತ್ರ ಸಿದ್ಧಗೊಳಿಸಿರುವುದಾಗಿ ಹಿರಿಯ ಬಿಜೆಪಿ ಧುರೀಣ ಶಂಕರಣ್ಣ ಮುನವಳ್ಳಿ ’ಸಂಜೆ ದರ್ಪಣ’ ಪತ್ರಿಕೆಗೆ ತಿಳಿಸಿದ್ದಾರೆ.
ತಾವು ಬಿಜೆಪಿಯಿಂದ ದ್ವಿತೀಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇಚ್ಛೆ ಇದ್ದರೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ ಎಂದು ತಿಳಿಸಿದರು.
ಕೇವಲ ತಮ್ಮ ತಮ್ಮನ ಸಲುವಾಗಿ ಪ್ರಯತ್ನಿಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವು ಕಾರ್ಯಕರ್ತರು ಕೇವಲ ಪಲ್ಲಕ್ಕಿ ಮಾತ್ರ ಹೋರುವವರಾಗಬೇಕೆ ಎಂಬ ಪ್ರಶ್ನೆ ಕಾಡುತ್ತಿದೆ. ಅದಕ್ಕಾಗಿ ಈಗ ನಾಮಪತ್ರ ತಯಾರಿ ಮಾಡಿಕೊಂಡಿದ್ದೇನೆ. ಸೂಚಕರು ಸಹ ಸಹಿ ಮಾಡಿದ್ದಾರೆ. ಆದರೆ ಕೊನೆ ಕ್ಷಣದಲ್ಲಿ ನನ್ನ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸುವೆ ಎಂದು ತಿಳಿಸಿದರು.

 

 

 

shakranna munvalli nomination /hubblli/23-11-2021

administrator

Related Articles

Leave a Reply

Your email address will not be published. Required fields are marked *