ಹುಬ್ಬಳ್ಳಿ-ಧಾರವಾಡ ಸುದ್ದಿ

ಶೆಟ್ಟರ್ ಗೆಲುವು ನಿಕ್ಕಿ : ರಕ್ತದಲ್ಲಿ ಪತ್ರ ಬರೆದ ಅಭಿಮಾನಿ

ಹುಬ್ಬಳ್ಳಿ: ಸೆಂಟ್ರಲ್ ಕ್ಷೇತ್ರದ ಚುನಾವಣೆಯಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರನ್ನು ಸೋಲಿಸಲು ಚಕ್ರವ್ಯೂಹ ಹೆಣೆಯುತ್ತ ಅವರ ವಿರುದ್ಧ ದೊಡ್ಡ ದೊಡ್ಡ ನಾಯಕರೆ ಸೇಡಿನ ಹೇಳಿಕೆ ನೀಡುತ್ತಿದ್ದಾರೆ. ಜಗದೀಶ ಶೆಟ್ಟರ ಗೆಲ್ಲುವುದಿಲ್ಲ. ಬೇಕಾದರೆ ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದು ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಲಿಂಗಾಯತ ಯುವ ಮುಖಂಡ ತಿರುಗೇಟು ನೀಡಿದ್ದಾನೆ.


ಹುಬ್ಬಳ್ಳಿಯ ಶೆಟ್ಟರ್ ಅಭಿಮಾನಿ ಮಂಜುನಾಥ ಯಂಟ್ರುವಿ ಶೆಟ್ಟರ್ ಗೆಲುವು ನೂರಕ್ಕೆ ನೂರರಷ್ಟು ಖಚಿತ ಎಂದು ರಕ್ತದಲ್ಲಿ ಪತ್ರ ಬರೆದುಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ರಕ್ತದಲ್ಲಿ ಪತ್ರದಲ್ಲಿ ’ಮಾನ್ಯ ಜಗದೀಶ್ ಶೆಟ್ಟರ್ 100ಕ್ಕೆ 100ರಷ್ಟು ವಿಜಯಶಾಲಿ ಆಗುತ್ತಾರೆ ಅದಲ್ಲದೇ ಈ ಸಾರಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬರುತ್ತದೆ’ ಎಂದು ಬರೆದುಕೊಂಡಿದ್ದಾನೆ ಅಷ್ಟೇ ಅಲ್ಲದೇ ಜೈ ಕಾಂಗ್ರೆಸ್ ಎಂದು ಹೇಳಿದ್ದಾನೆ.

administrator

Related Articles

Leave a Reply

Your email address will not be published. Required fields are marked *