ಹುಬ್ಬಳ್ಳಿ-ಧಾರವಾಡ ಸುದ್ದಿ

ಸ್ವಾಭಿಮಾನಿ ಶೆಟ್ಟರ್‌ಗೆ ’ಭಜರಂಗಿ’ ಬಲ

ನಗರದಲ್ಲಿ ಶಿವರಾಜಕುಮಾರ ಬೃಹತ್ ರೋಡ ಶೋ

ಹುಬ್ಬಳ್ಳಿ: ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪರವಾಗಿ ಹ್ಯಾಟ್ರಿಕ್ ಹಿರೋ ಡಾ. ಶಿವರಾಜ ಕುಮಾರ ರೋಡ್ ಶೋ ನಡೆಸಿ ಮತ ಯಾಚನೆ ಮಾಡಿದರು.
ನಾಗಶೆಟ್ಟಿಕೊಪ್ಪದ ಆಂಜನೇಯ ದೇವಸ್ಥಾನದಿಂದ ರಾಮನಗರದವರೆಗೆ ತೆರೆದ ವಾಹನ ದಲ್ಲಿ ಬೃಹತ್ ರೋಡ್ ಶೋ ನಡೆಸಿದ ಶಿವರಾಜಕುಮಾರ ಹಾಗೂ ಗೀತಾ ಶಿವರಾಜಕುಮಾರ ಅವರು ಅಭಿಮಾನಿಗಳತ್ತ ಕೈ ಬೀಸಿದರು.


ಕಳೆದ ಮೂರು ದಶಕಗಳಿಂದ ಹುಬ್ಬಳ್ಳಿಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಶೆಟ್ಟರ್ ಅವರಿಗೆ ಮತ್ತೊಮ್ಮೆ ನಿಮ್ಮೆಲ್ಲರ ಆಶೀರ್ವಾದವಿರಲಿ.ದಾಖಲೆಯ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು
ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್, ಮುಖಂಡ ರಾದ ರಜತ್ ಉಳ್ಳಾಗಡ್ಡಿಮಠ, ಪಿ.ಕೆ. ರಾಯನಗೌಡ್ರ, ಸತೀಶ್ ಮೆಹರವಾಡೆ, ಶಿಲ್ಪಾ ಶೆಟ್ಟರ್, ಸಂಕಲ್ಪ ಶೆಟ್ಟರ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಇದ್ದರು.


ಮುಂಡಗೋಡ ಕಾರ್ಯಕ್ರಮ ಮುಗಿಸಿ ಕೇಶ್ವಾಪುರಕ್ಕೆ ತಮ್ಮ ನೆಚ್ಚಿನ ನಟ ಆಗಮಿಸುತ್ತಿದ್ದಂತೆಯೆ ಅಭಿಮಾನಿಗಳ ಘೋಷಣೆ ಮುಗಿಲು ಮುಟ್ಟಿತು.

administrator

Related Articles

Leave a Reply

Your email address will not be published. Required fields are marked *