ಹುಬ್ಬಳ್ಳಿ-ಧಾರವಾಡ ಸುದ್ದಿ
ಹುಬ್ಬಳ್ಳಿ ಲೆಜೆಂಡ್ಸ್‌ಗೆ ಶ್ರೇಯಾ ಟಿ ಟ್ವೆಂಟಿ ಕಪ್

ಹುಬ್ಬಳ್ಳಿ ಲೆಜೆಂಡ್ಸ್‌ಗೆ ಶ್ರೇಯಾ ಟಿ ಟ್ವೆಂಟಿ ಕಪ್

ಖಿಲಾರೆ ಹೊಡೆಬಡಿಯ ಶತಕ

ಹುಬ್ಬಳ್ಳಿ: ಆದಿತ್ಯ ಖಿಲಾರೆ ಸಿಡಿಸಿದ ಆಕರ್ಷಕ ಶತಕದ ನೆರವಿನಿಂದ ಇಲ್ಲಿಯ ಆರ್‌ಐಎಸ್ ಮೈದಾನದಲ್ಲಿ ನಡೆದ 35 ವರ್ಷದ ಮೇಲ್ಪಟ್ಟ ಹಿರಿಯ ಆಟಗಾರರಿಗೆ ಆಯೋಜಿಸಲಾಗಿರುವ ಶ್ರೇಯಾ ಟಿ ಟ್ವೆಂಟಿ ಕಪ್-2022 ಟೂರ್ನಿಯಲ್ಲಿ ಹುಬ್ಬಳ್ಳಿ ಧಾರವಾಡ ಲೆಜೆಂಡ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು.


ಅಂತಿಮ ಪಂದ್ಯದಲ್ಲಿ ಬೆಳಗಾವಿಯ ಕೆ.ಆರ್.ಶೆಟ್ಟಿ ಕಿಂಗ್ಸ್ 20 ಒವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 177 ರನ್ ಗಳಿಸಿದರೆ ಹುಬ್ಬಳ್ಳಿ ತಂಡ 16.5 ಒವರ್‌ಗಳಲ್ಲಿ ಕೇವಲ ಎರಡು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಖಿಲಾರೆ 53 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 12 ಬೌಂಡರಿಗಳ ನೆರವಿನಿಂದ ಅಜೇಯ ೧೦೫ ಹಾಗೂ ಶೋಯಬ್ 43 ಓಟಗಳನ್ನು ಬಾರಿಸಿ ಗೆಲುವು ತಂದುಕೊಟ್ಟರು. ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗಳು ಖಿಲಾರೆ ಪಾಲಾದರೆ, ಉತ್ತಮ ಬ್ಯಾಟ್ಸಮನ್ ಕೆ.ಆರ್.ಶೆಟ್ಟಿ ಕಿಂಗ್ಸ್‌ನ ಪ್ರಶಾಂತ ಲಯನದಾರ ಹಾಗೂ ಲೆಜೆಂಡ್ಸ್‌ನ ಸಾಧಿಕ್ ಕಿತ್ತೂರ ಉತ್ತಮ ಬೌಲರ್ ಗೌರವ ಪಡೆದರು.
ಸಮಾರೋಪ ಸಮಾರಂಭದಲ್ಲಿ ಕೆಎಸ್ ಸಿಎ ವಲಯ ನಿಮಂತ್ರಕ ಅವಿನಾಶ ಪೋತದಾರ, ಧಾರವಾಡ ಅಂಜುಮನ್ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಕಾಂಗ್ರೆಸ್ ಮುಖಂಡ ಅನಿಲಕುಮಾರ ಪಾಟೀಲ, ನೈರುತ್ಯ ರೇಲ್ವೆಯ ಸುಜಾ ಮೆಹಮೂದ್,ಆಸೀಪ ಹಪೀಜ್,ವಿ.ಟಿ.ಕರಿಸಂಕಣ್ಣವರ, ಮುಂತಾದವರು ಪಾಲ್ಗೊಂಡು ವಿಜೇತರಿಗೆ ಪ್ರಶಸ್ತಿ ವಿತರಿಸಿದರು.

 

 

administrator

Related Articles

Leave a Reply

Your email address will not be published. Required fields are marked *