ಹುಬ್ಬಳ್ಳಿ-ಧಾರವಾಡ ಸುದ್ದಿ

ತಮಾಟಗಾರಗೆ ಕಾಂಗ್ರೆಸ್ ಸಂಸ್ಕೃತಿ ಗೊತ್ತಿಲ್ಲ

ಅವಕಾಶವಾದಿಗಳ ಬಗ್ಗೆ ಹೆಚ್ಚು ಮಾತನಾಡಲ್ಲ

ಹುಬ್ಬಳ್ಳಿ: ಇಸ್ಮಾಯಿಲ್ ತಮಾಟಗಾರ ಅವರಿಗೆ ಕಾಂಗ್ರೆಸ್ ಸಂಸ್ಕೃತಿ ಗೊತ್ತಿಲ್ಲ. ಅವರೆಲ್ಲಾ ಅವಕಾಶವಾದಿಗಳು ಎಂದು ಹು.ಧಾ.ಪೂರ್ವ ಶಾಸಕ ಪ್ರಸಾದ ಅಬ್ಬಯ್ಯ ತಿರುಗೇಟು ನೀಡಿದ್ದಾರೆ.
ತಮಗೆ ಬಿಜೆಪಿ ಏಜೆಂಟ್ ಆರೋಪ ಮಾಡಿರುವ ತಮಾಟಗಾರ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅಬ್ಬಯ್ಯ ನಮ್ಮ ಪಕ್ಷಕ್ಕೆ ಹೊಸದಾಗಿ ಬಂದಿದ್ದಾರೆ.ಅವರಿಗೆ ಕಾಂಗ್ರೆಸ್ ಪಕ್ಷ ಅಂದರೆ ಏನು,ಅದರ ನಾಯಕತ್ವದ ಬಗೆಗೆ ಯಾವುದೇ ಅರಿವಿಲ್ಲ. ಎಲ್ಲಿಂದಲೋ ಬರುತ್ತಾರೆ, ಎಲ್ಲೋ ಹೋಗುತ್ತಾರೆ ಅಂತವರ ಬಗ್ಗೆ ಮಾತನಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದರು.


ಇಂತಹ ನೂರು ಜನ ಹೇಳಿದರೂ ಏನೂ ಆಗಲ್ಲ. ಅವಕಾಶವಾದಿಗಳ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯಿಸಲಾರೆ ಅಲ್ಲದೇ ಅವರು ಕಾಂಗ್ರೆಸ್ ಪಕ್ಷದ ಬೇಸ್‌ನಿಂದ ಬಂದವರಲ್ಲ. ಅವರ ಬಗ್ಗೆ ಮಾತಾಡೋದು ಯುಸಲೆಸ್ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾಗಿರುವ ತಮಾಟಗಾರ ಅಬ್ಬಯ್ಯ ಬಗೆಗೆ ಕಾರ್ಯಕರ್ತರೊಬ್ಬರ ಜತೆ ಮಾತನಾಡುವಾಗ ಬಿಜೆಪಿ ಏಜೆಂಟ್ ಎಂದು ಹೇಳಿದ್ದು ವ್ಯಾಪಕ ವೈರಲ್ ಆಗಿದೆ.

 

administrator

Related Articles

Leave a Reply

Your email address will not be published. Required fields are marked *