ಹುಬ್ಬಳ್ಳಿ-ಧಾರವಾಡ ಸುದ್ದಿ
ಎಸ್‌ಎಸ್‌ಕೆ; ಬಡ ಮಹಿಳೆಯರಿಗೆ ಸೀರೆ ವಿತರಣೆ

ಎಸ್‌ಎಸ್‌ಕೆ; ಬಡ ಮಹಿಳೆಯರಿಗೆ ಸೀರೆ ವಿತರಣೆ

ವರ್ಲ್ಡ್ ಸ್ಕ್ವೇರ್ ಪ್ರಾಯೋಜಕತ್ವದಲ್ಲಿ ಅರ್ಥಪೂರ್ಣ ಕಾರ್ಯಕ್ರಮ

ಹುಬ್ಬಳ್ಳಿ: ಎಸ್‌ಎಸ್‌ಕೆ ಸಮಾಜದ ಬಡ ಮಹಿಳೆಯರಿಗೆ1008 ಸೀರೆಗಳನ್ನು ವಿತರಿಸುವ ಕಾರ್ಯಕ್ರಮ ಗೋಕುಲ್ ರೋಡ್‌ನ ಹೋಟೆಲ್ ಕ್ಯೂಬಿಕ್ಸ್‌ನಲ್ಲಿ ಅರ್ಥ ಪೂರ್ಣವಾಗಿ ನಡೆಯಿತು.
ಎಸ್‌ಎಸ್‌ಕೆ ಶ್ರೀ ತುಳಜಾಭವಾನಿ ದೇವಸ್ಥಾನ, ಕೇಂದ್ರ ಪಂಚ ಸಮಿತಿ, ಹುಬ್ಬಳ್ಳಿ-ಧಾರವಾಡ ಈ ಸಂಸ್ಥೆಯ ಪರವಾಗಿ ವರ್ಲ್ಡ್ ಸ್ಕ್ವೇರ್ ಫೌಂಡೇಶನ್ ಹುಬ್ಬಳ್ಳಿ ಇವರ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ

WORLD SQURE

ಎಸ್‌ಎಸ್‌ಕೆ ಚೀಫ್ ಟ್ರಸ್ಟಿ ನೀಲಕಂಠ ಪಿ. ಜಡಿ ಅಧ್ಯಕ್ಷತೆ ವಹಿಸಿದ್ದರು.

ಶಾಸಕರಾದ ಪ್ರಸಾದ ಅಬ್ಬಯ್ಯ ಪಾಲ್ಗೊಂಡು ಮಾತನಾಡಿ, ಸಮಾಜದ ಒಗ್ಗಟ್ಟನ್ನು ಎಸ್‌ಎಸ್‌ಕೆ ಸಮಾಜದಲ್ಲಿ ಕಾಣಬಹುದಾಗಿದ್ದು, ಸದಾ ಸಮಾಜದ ಚಟುವಟಿಕೆಗಳಿಗೆ ಸ್ಪಂದಿಸುವುದಾಗಿ ಹೇಳಿದರು.
ಮಾಜಿ ಸಿಎಂ ಪುತ್ರ ಸಂಕಲ್ಪ ಶೆಟ್ಟರ್, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಾಜಿ ಶಾಸಕ ಅಶೋಕ ಕಾಟವೆ, ಕೆಪಿಸಿಸಿ ಕಾರ್ಯಕಾರಿ ಸದಸ್ಯ ಸತೀಶ ಮೆಹರವಾಡೆ, ವರ್ಲ್ಡ ಸ್ಕ್ವೇರ್ ಪ್ರಾಪರ್ಟಿಸ್‌ನ ಚೇರಮನ್ ಯೋಗೇಶ ಹಬೀಬ, ಹಿರಿಯರಾದ ಅಶೋಕ ಹಬೀಬ,ಹುಡಾ ಮಾಜಿ ಅಧ್ಯಕ್ಷ ಬಾಳು ಮಗಜಿಕೊಂಡಿ, ಎಸ್ ಎಸ್‌ಕೆ ಬ್ಯಾಂಕ್ ಅಧ್ಯಕ್ಷ ವಿಠ್ಠಲ ಲದವಾ, ಸಮಾಜದ ಪ್ರಮುಖರಾದ ಹನಮಂತಸಾ ನಿರಂಜನ, ಶ್ರೀಕಾಂತ ಹಬೀಬ, ನಾರಾಯಣ ಖೋಡೆ, ಕೆ.ಟಿ. ಪವಾರ, ಕಿರಣ ಪೂಜಾರಿ, ಭಾಸ್ಕರ ಜಿತೂರಿ ಸಹಿತ ಅನೇಕರು ಪಾಲ್ಗೊಂಡಿದ್ದರು.

administrator

Related Articles

Leave a Reply

Your email address will not be published. Required fields are marked *