ಹುಬ್ಬಳ್ಳಿ-ಧಾರವಾಡ ಸುದ್ದಿ
ಪಾಲಿಕೆ ಚುನಾವಣೆ : ಜುಲೈ ೧೦ಕ್ಕೆ ಘೋಷಣೆ? ಮತದಾರರ ಪಟ್ಟಿ ಭರದ ಕಾರ್ಯ – ನೋಡಲ್ ಆಫೀಸರ್ ನೇಮಕ

ಪಾಲಿಕೆ ಚುನಾವಣೆ : ಜುಲೈ ೧೦ಕ್ಕೆ ಘೋಷಣೆ? ಮತದಾರರ ಪಟ್ಟಿ ಭರದ ಕಾರ್ಯ – ನೋಡಲ್ ಆಫೀಸರ್ ನೇಮಕ

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಮತದಾರರ ಪಟ್ಟಿ ಅಂತಿಮಗೊಳಿಸುವ ಪ್ರಕ್ರಿಯೆ ನಡೆದಿದ್ದು ಮೇಲುಸ್ತುವಾರಿಗೆ ಎಸಿ ಹುದ್ದೆಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದ್ದು,ದಿ.೯ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲು ರಾಜ್ಯ ಚುನಾವಣಾ ಆಯೋಗ ಸೂಚಿಸಿದ ಹಿನ್ನೆಲೆಯಲ್ಲಿ ಭರದಿಂದ ಸಾಗುತ್ತಿದೆ.
ಈಗಾಗಲೇ ವಾರ್ಡುಗಳ ವಿಂಗಡಣೆ ಅಧಿಸೂಚನೆಯಂತೆ ವಾರ್ಡ ವ್ಯಾಪ್ತಿಯ ಮತದಾರರ ಕರಡುಪಟ್ಟಿ ವಲಯವಾರು ೨೮-೦೬-೨೦೨೧ರಂದು ಪ್ರಕಟಿಸಲಿದ್ದು ಆಕ್ಷೇಪಣೆಗಳನ್ನು ಸಲ್ಲಿಸಲು ೦೧-೦೭-೨೦೨೧ರಂದು ಅಂತಿಮ ದಿನವಾಗಿದೆ. ಎರಡು ವಲಯಗಳಿಗೊಬ್ಬರಂತೆ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಹೈಕೋರ್ಟ ಸೂಚಿಸಿರುವ ಕಾಲಮಿತಿಯೊಳಗೆ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಚುನಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿರುವುದರಿಂದ ದಿ.೧೪-೦೬-೨೦೨೧ರಂದು ನೀಡಿರುವ ಕಾರ್ಯಕ್ರಮ ಪಟ್ಟಿಯಂತೆ ಮತದಾರರ ಪಟ್ಟಿಯನ್ನು ಜುಲೈ ೯ರಂದು ಪ್ರಕಟಿಸಬೇಕೆಂದು ಆಯೋಗ ದಿ.೨೨ರಂದು ಸ್ಪಷ್ಟವಾಗಿ ಹೇಳಿದ್ದರಿಂದ ಜುಲೈ ಅಂತ್ಯದೊಳಗೆ ನಡೆಯುವುದ ಖಚಿತ ಎಂದು ಬೆಂಗಳೂರಿನ ನಂಬಲರ್ಹ ಮೂಲಗಳು ಹೇಳಿವೆ.
ಹು-ಧಾ ಪಾಲಿಕೆ ಚುನಾವಣೆ ಸಂಬಂಧ ಹೈಕೋರ್ಟನಲ್ಲಿ ದಾಖಲಾಗಿದ್ದ ಪ್ರಕರಣ ಸಂಖ್ಯೆ (ಡಬ್ಲು ಪಿ ನಂ ೪೯೮೧೪/೨೦೧೯ ಸಿ/ಡಬ್ಲು ಡಬ್ಲು ಪಿ ನಂ ೨೪೫ /೨೦೨೦)ರ ಪ್ರಕರಣದಲ್ಲಿ ದಿ.೧೭-೧೨-೨೦೨೦ ಆದೇಶದಂತೆ ಜುಲೈ ೩೦ರೊಳಗೆ ಚುನಾವಣೆ ಪ್ರಕ್ರಿಯೆ ಮುಗಿಯುವ ಸಾಧ್ಯತೆಗಳಿದ್ದು, ಮತದಾರರ ಪಟ್ಟಿ ಪ್ರಕಟಗೊಳ್ಳುತ್ತಿದ್ದಂತೆಯೇ ಚುನಾವಣಾ ಆಯೋಗ ದಿ.೧೦ಕ್ಕೆ ಚುನಾವಣಾ ಪ್ರಕ್ರಿಯೆ ವಿವರ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಈಗಾಗಲೇ ಪಾಲಿಕೆ ಚುನಾವಣೆ ಅಖಾಡಕ್ಕೆ ಸದ್ದಿಲ್ಲದೇ ಸಿದ್ದತೆಗಳು ನಡೆದಿದ್ದು ಇದೇ ಮೊದಲ ಬಾರಿಗೆ ಅಖಾಡಕ್ಕೆ ಇಳಿಯಲಿರುವ ಆಮ ಆದ್ಮಿ ಪಕ್ಷ ಎಲ್ಲರಿಗಿಂತ ಮುಂದಿದ್ದು, ಈಗಾಗಲೇ ಅಭ್ಯರ್ಥಿಗಳ ಅಂತಿಮಗೊಳಿಸುವ ಹಂತ ತಲುಪಿದೆ.ಬಿಜೆಪಿಯಲ್ಲಿ ಸದ್ದಿಲ್ಲದೇ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಾಮಾನ್ಯರಿಗೆ ಮೀಸಲಾದ ಕ್ಷೇತ್ರಗಳು ತೀವ್ರ ತಲೆ ಬಿಸಿ ಉಂಟುಮಾಡುವ ಸಾಧ್ಯತೆಗಳಿವೆ.ಕೆಲ ವಾರ್ಡಗಳಲ್ಲಿ ೮ಕ್ಕಿಂತ ಹೆಚ್ಚಿನ ಆಕಾಂಕ್ಷಿಗಳಿದ್ದಾರೆ.ಕಾಂಗ್ರೆಸ್‌ನಲ್ಲಿ ಕೂಡ ಚಟುವಟಿಕೆ ಗರಿಗೆದರಿದ್ದು ಕೆಲ ಬ್ಲಾಕ್‌ಗಳಲ್ಲಿ ಆಕಾಂಕ್ಷಿಗಳ ಸಭೆ ಸಹ ನಡೆಸಲಾಗಿದೆ. ಕಳೆದ ೨೭ ತಿಂಗಳುಗಳಿಂದ ಚುನಾಯಿತ ಪ್ರತಿನಿಧಿಗಳಿಲ್ಲದಿರುವ ಮಹಾನಗರ ಪಾಲಿಕೆಗೆ ಅಗಸ್ಟನಲ್ಲಿ ಹೊಸಬರ ಆಗಮನ ನಿಶ್ಚಿತ ಎಂಬ ವಾತಾವರಣ ಸೃಷ್ಟಿಯಾಗಲಾರಂಭಿಸಿದೆ.
ಚುನಾವಣೆ ನಿಶ್ಚಿತ ಎಂಬ ವದಂತಿ ಹಿನ್ನೆಲೆಯಲ್ಲಿ ಕೋವಿಡ್ ನೆರವಿನ ಕಿಟ್‌ಗಳ ಹಂಚಿಕೆಯಲ್ಲಿ ಮಾಡಿ ತಟಸ್ಥರಾಗಿದ್ದವರು ಮತ್ತೆ ಈಗ ಸಕ್ರೀಯರಾಗಿದ್ದು, ಮತದಾರರ ಮನ ಗೆಲ್ಲುವ ಯತ್ನ ನಡೆಸಿದ್ದಾರೆ. ಚುನಾವಣೆ ಘೋಷಣೆಯಾದರೂ ಐವರಿಗಿಂತ ಹೆಚ್ಚು ಜನ ಇಲ್ಲದೇ ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶ ನೀಡುವ ಸಾಧ್ಯತೆಗಳಿವೆ.

administrator

Related Articles

Leave a Reply

Your email address will not be published. Required fields are marked *