ಹುಬ್ಬಳ್ಳಿ-ಧಾರವಾಡ ಸುದ್ದಿ
ಪ್ರತ್ಯೇಕ ಪಾಲಿಕೆಗೆ ಆಗ್ರಹ

ಪ್ರತ್ಯೇಕ ಪಾಲಿಕೆಗೆ ಆಗ್ರಹ

ಧಾರವಾಡ : ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡುವಂತೆ ಆಗ್ರಹಿಸಿ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
೧೯೬೨ರಲ್ಲಿ ಸರಕಾರಿ ಹು-ಧಾ ಮಹಾನಗರ ಪಾಲಿಕೆಯನ್ನು ರಚನೆ ಮಾಡಿತು. ಅಂದಿನಿAದ ಇಲ್ಲಿಯ ವರೆಗೆ ಧಾರವಾಡ ವಿದ್ಯೆಗೆ ಮತ್ತು ಹುಬ್ಬಳ್ಳಿ ವಾಣಿಜ್ಯ ನಗರಗಳಾಗಿ ಬೆಳೆದಿವೆ. ಅದಕ್ಕೆ ತಕ್ಕಂತೆ ಜನಸಂಖ್ಯೆ ಹಾಗೂ ಎರಡೂ ನಗರಗಳ ಸಮಸ್ಯೆಗಳು ಬೆಳೆದಿವೆ. ಆದರೆ, ಈ ವರೆಗೆ ಮಾತ್ರ ಧಾರವಾಡ ಜನತೆಯ ಸಮಸ್ಯೆಗಳು ಹಾಗೆಯೇ ಉಳಿದಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಳೆಯುತ್ತಿರುವ ಜನಸಂಖ್ಯೆ ಮತ್ತು ವಿಸ್ತಾರವಾಗಿರುವ ಪಾಲಿಕೆಯ ಕಾರ್ಯ ವ್ಯಾಪ್ತಿ ಹಾಗೂ ಎರಡೂ ನಗರಗಳ ಮಧ್ಯೆ ಇರುವ ಭೌಗೋಳಿಕ ಅಂತರ ದಿಂದಾಗಿ ನಗರ ಪಾಲಿಕೆಯ ಆಡಳಿತ ಸಮರ್ಪಕವಾಗಿ ನಡೆಯುತ್ತಿಲ್ಲ. ನಗರ ಪಾಲಿಕೆ ಆಯುಕ್ತರು ಮತ್ತು ಮಹಾಪೌರರು ವಾರದಲ್ಲಿ ಎರಡು ದಿನ ಧಾರವಾಡ ಪಾಲಿಕೆ ಕಾರ್ಯಾಲಯದಿಂದ ಕಾರ್ಯ ನಿರ್ವಹಿಸಬೇಕೆಂದಿ ದ್ದರೂ ಅದೂ ಆಗುತ್ತಿಲ್ಲ. ಕಾಟಾಚಾರಕ್ಕಾಗಿ ಮಾತ್ರ ಕೆಲ ಸಮಯ ಭೇಟಿ ನೀಡಿ ಸುಮ್ಮನಾಗುತ್ತಿದ್ದಾರೆ. ಇದರಿಂದಾಗಿ ಧಾರವಾಡ ಜನರ ಕುಂದು ಕೊರತೆ, ನಗರ ವೀಕ್ಷಣೆ ಮಾಡುವ ಕೆಲಸ ನೆನೆಗುದಿಗೆ ಬಿದ್ದಿವೆ ಎಂದು ದೂರಿದರು.
ಮಹಾನಗರ ಪಾಲಿಕೆಯ ಹೆಚ್ಚಿನ ಆದಾಯ ಹಾಗೂ ವಿವಿಧ ಯೋಜನೆ ಗಳಡಿ ಸರಕಾರದಿಂದ ಬಂದ ವಿಶೇಷ ಅನುದಾನಗಳ ಸಿಂಹಪಾಲು ಹುಬ್ಬಳ್ಳಿ ನಗರಕ್ಕೆ ಬಳಕೆ ಮಾಡಲಾಗುತ್ತಿದ್ದು, ಸ್ಮಾರ್ಟ್ ಸಿಟಿ ಯೋಜನೆಯಲ್ಲಿಯೂ ಧಾರವಾಡಕ್ಕೆ ಸಿಗಬೇಕಾದ ನ್ಯಾಯಯುತ ಪಾಲು ದೊರೆತಿಲ್ಲ. ಇದರಿಂದ ಧಾರವಾಡ ನಗರ ಅಭಿವೃದ್ಧಿಯಿಂದ ಕುಂಠಿತವಾಗುತ್ತಿದೆ ಎಂದರು.
ಧಾರವಾಡ ನಗರಕ್ಕೆ ಐತಿಹಾಸಿಕವಾಗಿ ಪ್ರತ್ಯೇಕ ಅಸ್ಮಿತೆ ಇದೆ. ಆದ್ದರಿಂದ ಧಾರವಾಡ ನಗರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಿದರೆ ಇದೂ ಸಹ ಎಲ್ಲ ರೀತಿಯಿಂದ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮನೋಜ ಪಾಟೀಲ, ಲಲಿತ ಭಂಡಾರಿ, ಗೋಪಾಲ ಜೋಶಿ, ವೆಂಕಟೇಶ ಮಾಚಕನೂರ ಇದ್ದರು.

administrator

Related Articles

Leave a Reply

Your email address will not be published. Required fields are marked *