ಹುಬ್ಬಳ್ಳಿ-ಧಾರವಾಡ ಸುದ್ದಿ

ಐರನ್‌ಮ್ಯಾನ್ ಟ್ರಯಥ್ಲಾನ್‌ನಲ್ಲಿ ಅದ್ಭುತ ಸಾಧನೆ

ಕರ್ನಾಟಕ ಪೊಲೀಸ್ ಕೀರ್ತಿ ಹೆಚ್ಚಿಸಿದ ಐವರು

ಹುಬ್ಬಳ್ಳಿ: ಕೊಲ್ಲಾಪುರದಲ್ಲಿ ನಡೆದ ವಿಶಿಷ್ಟ ಕ್ರೀಡೆ-ಐರನ್‌ಮ್ಯಾನ್ ಟ್ರಯಥ್ಲಾನ್‌ನಲ್ಲಿ (ಈಜು, ಸೈಕಲ್, ಓಟ) ಐವರು ಖಾಕಿ ಅಧಿಕಾರಿಗಳು ಹೊಸ ಸಾಧನೆ ಮಾಡಿ ಕರ್ನಾಟಕ ಪೊಲೀಸ್‌ರಿಗೆ ಹಿರಿಮೆ ತಂದಿದ್ದಾರೆ.

ಡಿಎಸ್‌ಪಿ ಭರತ ರೆಡ್ಡಿ, ಹೆಸ್ಕಾ ವಿಚಕ್ಷಕ ದಳ ಪಿಐ ಮುರುಗೇಶ ಚನ್ನಣ್ಣವರ, ಘಟಪ್ರಭಾ ಪಿಐ ಶ್ರೀಶೈಲ ಬ್ಯಾಕೋಡ, ಎಸಿಬಿ ಬಾಗಲಕೋಟ ಪಿಐ ಸಮೀರ ಮುಲ್ಲಾ ಹಾಗೂ ಕೆಎಸ್‌ಆರ್‌ಪಿ ಹೆಡ್ ಕಾನ್ಸಟೇಬಲ್ ಭೈರಪ್ಪ ಚೌಗಲಾ ಇವರೇ ಸಾಧನೆ ಮಾಡಿದವರಾಗಿದ್ದಾರೆ.


19 ಕಿ.ಮಿ ದೂರದ ಈಜು, 90 ಕಿ ಮಿ ಸೈಕಲ್ ಹಾಗೂ 21.1 ಕಿ.ಮಿ ಒಟವನ್ನು ನಿಗದಿತ ಅವಧಿಯಲ್ಲಿ ಕ್ರಮಿಸಿ ಇಲಾಖೆಗೆ ಕೀರ್ತಿ ತಂದಿದ್ದಾರೆ. ಚನ್ನಣ್ಣವರ ಅವರು ಈಗಾಗಲೇ ಫುಲ್ ಐರನ್‌ಮ್ಯಾನ್ ಮತ್ತು ಕಾಶ್ಮೀರದಿಂದ ಕನ್ಯಾಕುಮಾರಿ ಸೈಕ್ಲಿಂಗ್ ಪೂರ್ಣಗೊಳಿಸಿ ಸಾಧನೆ ಮಾಡಿದ್ದಾರೆ.

 

 

administrator

Related Articles

Leave a Reply

Your email address will not be published. Required fields are marked *