ಹುಬ್ಬಳ್ಳಿ-ಧಾರವಾಡ ಸುದ್ದಿ

ಟಿಟಿ: ವರುಣ, ತೃಪ್ತಿಗೆ ಪ್ರಶಸ್ತಿ

ಧಾರವಾಡ: ಪಿಒಎನ್ ಕ್ಲಬ್‌ನ ವರುಣ ಕೈಶಪ್ ಹಾಗೂ ಎಸ್‌ಕೆಐ ಕ್ಲಬ್‌ನ ತೃಪ್ತಿ ಪುರೋಹಿತ್ ಅವರು ಇಲ್ಲಿನ ಕಾಸ್ಮಸ್ ಕ್ಲಬ್ ಆಯೋಜಿಸಿರುವ ರಾಜ್ಯ ರ್‍ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ ೧೭ ವರ್ಷದ ಒಳಗಿನವರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.


ಭಾನುವಾರ ನಡೆದ ಬಾಲಕರ ವಿಭಾಗದ ಫೈನಲ್‌ನಲ್ಲಿ ಪಿಒಎನ್ ಕ್ಲಬ್‌ನ ವರುಣ ಕೈಶಪ್ 17 – 15,5 – 11,11 – 9,11 – 7,11 – 8ರಲ್ಲಿ ಎಸ್‌ಕೆಐಇಎಸ್ ಕ್ಲಬ್‌ನ ಶ್ರೀಕಾಂತ ಕೈಶಪ್ ಎದುರು ಗೆಲುವು ಸಾಧಿಸಿದರು.
ಬಾಲಕಿಯರ ಫೈನಲ್‌ನಲ್ಲಿ ಎಸ್‌ಕೆಐ ಕ್ಲಬ್‌ನ ತೃಪ್ತಿ ಪುರೋಹಿತ್ 11 – 6,11 – 5,11 – 13,5 – 11,11 – 7,11 – 9ರಲ್ಲಿ ಎಸ್‌ಕೆಐಇಎಸ್ ಕ್ಲಬ್‌ನ ಜಿ.ಕರುಣಾ ಎದುರು ಜಯಗಳಿಸಿ ಪ್ರಶಸ್ತಿ ಪಡೆದರು.
ವಿಜೇತರಿಗೆ ಜಿಲ್ಲಾಧಿಕಾರಿ ಕಾಸ್‌ಮಸ್ ಕ್ಲಬ್ ಅಧ್ಯಕ್ಷ ಬಸವರಾಜ ತೇಗೂರು ಅವರು ಬಹುಮಾನ ವಿತರಿಸಿದರು. ರವಿ ನಾಯಕ, ಪಿ.ಎಚ್.ಜಹಾಗಿರದಾರ, ವಿಜು ಪೈ,
ಎಸ್.ಎಂ.ರುದ್ರಸ್ವಾಮಿ, ವಿಜಯ ಸುಣಗಾರ, ಸಂಜು ಪಾಟೀಲ, ಟಿ.ಜಿ.ಉಪಾಧ್ಯ, ವಿನೋದ ಪಾಟೀಲ, ನಿತೀನ ಟಗರಪುರ, ಸುದೀಂದ್ರ ಚೋತ್ರಹನುಮಂತ ಕೊಟಬಾಗಿ, ಸಿ.ಎಚ್.ಜೋಗಿಹಳ್ಳಿ, ಪತ್ರಕರ್ತ ಪ್ರಸನ್ನಕುಮಾರ ಹಿರೇಮಠ ಸೇರಿದಂತೆ ಇತರರಿದ್ದರು.

administrator

Related Articles

Leave a Reply

Your email address will not be published. Required fields are marked *