ಹುಬ್ಬಳ್ಳಿ-ಧಾರವಾಡ ಸುದ್ದಿ
ಸಿಎಂ ಕಣ್ಗಾವಲಲ್ಲೇ ಸುಸೂತ್ರ ನಡೆಯಿತು!

ಸಿಎಂ ಕಣ್ಗಾವಲಲ್ಲೇ ಸುಸೂತ್ರ ನಡೆಯಿತು!

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಂತ್ಯ ಸಂಸ್ಕಾರ ಸುಸೂತ್ರವಾಗಿ ಮುಗಿದಿದ್ದು, ಈ ಜವಾಬ್ದಾರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಶಸ್ವಿಯಾಗಿ ನಿರ್ವಹಿಸಿದರು.


ಈ ಹಿಂದೆ ಜನಪ್ರಿಯ ನಟರ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಕೆಲ ಅಹಿತಕರ ಘಟನೆಗಳು ನಡೆದಿದ್ದವು. ಆದರೆ, ಪುನೀತ್ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಅಂತಹ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.
ಪುನೀತ್ ಕುಟುಂಬದ ಜತೆ ಸಿಎಂ ನಿರಂತರ ಸಂಪರ್ಕ ಇಟ್ಟುಕೊಂಡಿದ್ದರು. ಐದಾರು ಬಾರಿ ಕಂಠೀರವ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಅಲ್ಲಿನ ವ್ಯವಸ್ಥೆಯ ಮೇಲೆ ಸ್ವತಃ ಮೇಲುಸ್ತುವಾರಿ ವಹಿಸಿದ್ದರು.


ಪುನಿತ್ ಕುಟುಂಬದ ಸದಸ್ಯರ ಜತೆ ಮಾತುಕತೆ ನಡೆಸಿ. ಪವರ್ ಸ್ಟಾರ್‌ನ ಅಂತಿಮ ದರ್ಶನಕ್ಕೆ ಅಭಿಮಾನಿಗಳಿಗೆ ಸಾಕಷ್ಟು ಸಮಯಾವಕಾಶ ನೀಡುವ ವ್ಯವಸ್ಥೆ ಮಾಡಿ, ಸುವ್ಯವಸ್ಥೆ ಕಾಪಾಡಲು ಎಲ್ಲ ಕ್ರಮ ಕೈಗೊಂಡು ಬೆಂಗಳೂರು ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆಗೆ ಸೂಚಿಸಿದ್ದರು
ಪದೇ ಪದೆ ಜನತೆಗೆ ಮನವಿ ಮಾಡಿದ್ದರೂ ನಿಜಕ್ಕೂ ಪುನೀತ್ ಅಂತ್ಯ ಸಂಸ್ಕಾರ ಬೊಮ್ಮಾಯಿ ಅವರಿಗೆ ಸವಾಲಾಗಿತ್ತು. ಆದರೆ ಅದನ್ನು ಅತ್ಯಂತ ಅಚ್ವುಕಟ್ಟಾಗಿ, ವ್ಯವಸ್ಥಿತವಾಗಿ ನಿರ್ವಹಿಸಿದರು.
ಅತ್ಯಂತ ಜಟಿಲ ವಿಷಯಗಳನ್ನು ಸರಳವಾಗಿ ನಿಭಾಯಿಸುವಲ್ಲಿ ಬೊಮ್ಮಾಯಿ ನಿಷ್ಣಾತರಾಗಿದ್ದು ಅದು ಮತ್ತೊಮ್ಮೆ ಎಲ್ಲರ ಅನುಭವಕ್ಕೆ ಬಂದಿತು.

 

administrator

Related Articles

Leave a Reply

Your email address will not be published. Required fields are marked *