ಹುಬ್ಬಳ್ಳಿ-ಧಾರವಾಡ ಸುದ್ದಿ
ನಾಳೆ ನೆರೆಯ ಸವದತ್ತಿಗೆ ‘ವಿಕೆ’ ಬಾಸ್; ಜನನಾಯಕನ ವೈವಾಹಿಕ ಬದುಕಲ್ಲಿ ‘ಬೆಳ್ಳಿ ಸಂಭ್ರಮ’

ನಾಳೆ ನೆರೆಯ ಸವದತ್ತಿಗೆ ‘ವಿಕೆ’ ಬಾಸ್; ಜನನಾಯಕನ ವೈವಾಹಿಕ ಬದುಕಲ್ಲಿ ‘ಬೆಳ್ಳಿ ಸಂಭ್ರಮ’

ಹುಬ್ಬಳ್ಳಿ: ಮಾಜಿ ಸಚಿವ ವಿನಯ ಕುಲಕರ್ಣಿ ನಾಳೆ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದ ಗ್ರಾ ಪಂ ಸದಸ್ಯರ ಸಮಾವೇಶದಲ್ಲಿ ಪಾಲ್ಗೊಂಡು ಅಭ್ಯರ್ಥಿ ಸಲೀಮ್ ಅಹ್ಮದ್ ಪರ ಮತಯಾಚಿಸಲಿದ್ದಾರೆ.

ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ನೆರೆಯ ಸವದತ್ತಿ ಕಲ್ಯಾಣ ಮಂಟಪದಲ್ಲಿ ಈ ಸಮಾವೇಶ ನಡೆಯಲಿದೆ.

ಅಲ್ಲದೆ ವಿನಯ ಹಾಗೂ ಶಿವಲೀಲಾ ಅವರು ವೈವಾಹಿಕ ಜೀವನದಲ್ಲಿ ನಾಳೆ ‘ಬೆಳ್ಳಿ ಸಂಭ್ರಮ’ ಕ್ಕೆ (25ನೇ ವರ್ಷ ) ಕಾಲಿಡಲಿದ್ದು ತಮ್ಮನೆಚ್ಚಿನ ನಾಯಕನನ್ನು ಸಮಾವೇಶದ ನಂತರ ಅಭಿನಂದಿಸಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲ ಮೇಲೆ ನಿಂತಿದ್ದಾರೆ.

ಕಾರ್ಯಕ್ರಮ ದ ಮುನ್ನಾದಿನವಾದ ಇಂದು ಅಕ್ಷರಶಃ ಉತ್ತರ ಕರ್ನಾಟಕದ ಹುಲಿ ಎಂದೆ ಕರೆಯಲ್ಪಡುವ ವಿ.ಕೆ.ಬಾಸ್ ನ ಹೊಸ ಲುಕ್ ನ ಭಾವಚಿತ್ರಗಳು ಹೊರಗೆ ಬಂದಿದ್ದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ, ಅವರ ಅಭಿಮಾನಿಗಳಿಗೆ ಪುಳಕ ಮೂಡಿಸಿದೆಯಲ್ಲದೇ ವ್ಯಾಪಕ ವಾಗಿ ವೈರಲ್ ಆಗಿದೆ.

administrator

Related Articles

Leave a Reply

Your email address will not be published. Required fields are marked *