ಹುಬ್ಬಳ್ಳಿಗೆ ಮೃತದೇಹ ತರಲು ಹೊರಟವರು ಮಸಣಕ್ಕೆ
ರಾಮನಾಳ ಕ್ರಾಸ್ ಬಳಿ ಭೀಕರ ಅಪಘಾತ
ಹುಬ್ಬಳ್ಳಿ: ಖಾಸಗಿ ಬಸ್ ಹಾಗೂ ಕ್ರೂಜರ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಕಲಘಟಗಿ ತಾಲೂಕಿನ ರಾಮನಾಳ ಕ್ರಾಸ್ ಬಳಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ನಂದಿಗದ್ದಿ ನಿವಾಸಿಗಳಾದ ಶಿವನಗೌಡ ಪಾಟೀಲ, ಅಮೃತ ಪಾಟೀಲ ಸ್ಥಳದಲ್ಲೇ ಮೃತಪಟ್ಟಿದ್ದು ತೀವ್ರ ಗಾಯಗೊಂಡಿದ್ದು ಕ್ರೂಸರ್ ಚಾಲಕ ಮಾರುತಿ ಕಿಮ್ಸ್ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.
ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್ಗೆ ದಾಖಲು ಮಾಡಲಾಗಿತ್ತು.ಕ್ರೂಜರ್ನಲ್ಲಿ ಒಟ್ಟು 5ಜನರು ಪ್ರಯಾಣಿಸುತ್ತಿದ್ದರು.ಇವರೆಲ್ಲರೂ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಮೃತದೇಹವನ್ನು ತರಲು ಹೊರಟಿದ್ದಾಗ ಬೆಳಗಿನ ಜಾವ ಕಲಘಟಗಿಯ ರಾಮನಾಳ ಬಳಿ ಸೀ ಬರ್ಡ ಬಸ್ ಡಿಕ್ಕಿಯಾಗಿತ್ತು.
ಕಲಫಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.