ಹುಬ್ಬಳ್ಳಿ-ಧಾರವಾಡ ಸುದ್ದಿ
ಧಾರವಾಡ : ಗ್ರಾನೈಟ್ ವ್ಯಾಪಾರಿ ಮನೆಯಿಂದ ಚಿನ್ನಾಭರಣ ಕಳುವು

ಧಾರವಾಡ : ಗ್ರಾನೈಟ್ ವ್ಯಾಪಾರಿ ಮನೆಯಿಂದ ಚಿನ್ನಾಭರಣ ಕಳುವು

ಧಾರವಾಡ: ನಗರದ ಗ್ರಾನೈಟ್ ವ್ಯಾಪಾರಿಯೊಬ್ಬರ ಮನೆಯ ಮುಂದಿನ ಬಾಗಿಲ ಕೀಲಿ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಇಲ್ಲಿನ ಸಂಗಮ ಚಿತ್ರಮಂದಿರ ಬಳಿಯ ಕೆಂಪಗೇರಿಯಲ್ಲಿ ನಿನ್ನೆ ಮಧ್ಯಾಹ್ನ ನಡೆದಿದೆ.
ಅರುಣ ಬಸವರಾಜ ಹುನಗುಂದ ಎಂಬುವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ಹುನಗುಂದ ಕುಟುಂಬದವರು ಸಂಬಂದಿಯೊಬ್ಬರ ಮದುವೆ ಕಾರ್ಯಕ್ಕೆ ಯಾದಗೀರಗೆ ತೆರಳಿದ್ದಾಗ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ.


ಮನೆಯ ಮುಂಬಾಗಿಲಿನ ಕೀಲಿಮುರಿದು ಒಳ ಪ್ರವೇಶಿಸಿದ ಕಳ್ಳರು, ಮನೆಯಲ್ಲಿನ 250 ಗ್ರಾಂ. ನಷ್ಟು ಚಿನ್ನದ ಆಭರಣಗಳನ್ನು ದೋಚಿದ್ದಾರೆ.
ಇಂದು ಬೆಳಗ್ಗೆ ಮನೆಯವರು ಬಂದು ನೋಡಿದಾಗ ಮನೆ ಕಳ್ಳತನ ಆಗಿದ್ದು ಗೊತ್ತಾಗಿದೆ.ಸ್ಥಳಕ್ಕೆ ಸಿಪಿಐ ವಿಶ್ವನಾಥ ಚೌಗಲೆ ಅವರು, ಶ್ವಾನ, ಬೆರಳಚ್ಚು ತಜ್ಞರ ಜೊತೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

administrator

Related Articles

Leave a Reply

Your email address will not be published. Required fields are marked *