ಹುಬ್ಬಳ್ಳಿ-ಧಾರವಾಡ ಸುದ್ದಿ

ಯುವಕನ ಕೂಡಿ ಹಾಕಿ ಹಲ್ಲೆ: ಮೂವರು ಅರೆಸ್ಟ್

ಹುಬ್ಬಳ್ಳಿ: ವಿದ್ಯಾನಗರ ಠಾಣೆ ವ್ಯಾಪ್ತಿಯಲ್ಲಿನ ಹೊಟೆಲ್‌ನಲ್ಲಿ ಊಟ ಮುಗಿಸಿ ಬರುತ್ತಿದ್ದ ಯುವಕನಿಗೆ ಸೋಮವಾರ ರಾತ್ರಿ ಕಾರಿನಲ್ಲಿ ಹಾಕಿಕೊಂಡು ಹೋಗಿ ರೂಮಿನಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದ ಮೂವರ ತಂಡವನ್ನು ವಿದ್ಯಾನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಪುಡಿ ರೌಡಿಗಳಾದ ಸೆಟ್ಲಮೆಂಟನ ವಿಜಯ ಬಿಜವಾಡ, ವಿನಾಯಕ ಅಥಣಿ , ವೀರಾಪುರ ಓಣಿಯ ಪವನ ನೂಲ್ವಿ ಎಂಬುವವರನ್ನು ಬಂಧಿಸಲಾಗಿದೆ.
ವಿದ್ಯಾನಗರದ ರೇಣುಕಾ ಹೊಟೆಲ್‌ನಲ್ಲಿ ಊಟಕ್ಕೆ ತೆರಳಿದ್ದ ಹಳೇಹುಬ್ಬಳ್ಳಿಯ ಗುರುನಾಥ ನಗರದ ನಿವಾಸಿ ವಿವಿನ್ ರಿಚರ್ಡ್ (23)ನನ್ನು
ವೀರಾಪುರ ಓಣಿಗೆ ಕರೆದೊಯ್ದು ಬೆಳಿಗ್ಗೆ ಎಂಟು ಘಂಟೆವರೆಗೆ ರೂಮ್‌ನಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದು ಈ ಹಲ್ಲೆಯಿಂದ ಕೈ ಕಾಲು ಮುಖ ಊದಿಕೊಂಡಿದ್ದು
ತಲೆ, ಕೈ, ಮುಖ, ಬೆನ್ನು, ಹೊಟ್ಟೆಗೆ ಕಲ್ಲಿನಿಂದ ಜಜ್ಜಿ ಗಾಯಗೊಳಿಸಿರುವ ಬಿಜವಾಡ ತಂಡವು ಮಾರಣಾಂತಿಕ ಹಲ್ಲೆ ನಡೆಸಿದೆ ಎಂದು ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.


ದೂರಿನ ನಂತರ ಕಾರ್ಯಾಚರಣೆ ನಡೆಸಿದ ಇನ್‌ಸ್ಪೆಕ್ಟರ್ ಜಯಂತ ಗೌಳಿ, ಪಿಎಸ್ ಐ ಶ್ರೀಮಂತ ಹುಣಸೀಕಟ್ಟಿ, ಅಪರಾಧ ವಿಭಾಗದ ಸಿಬ್ಬಂದಿ ಮಂಜುನಾಥ ಯಕ್ಕಡಿ, ಮಲ್ಲಿಕಾರ್ಜುನ ಧನಿಗೊಂಡ, ಪರಶುರಾಮ ಹಿರಗಣ್ಣವರ, ಶಿವಾನಂದ ತಿರಕಣ್ಣವರ , ತಹಶೀಲ್ದಾರ ಮುಂತಾದವರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

administrator

Related Articles

Leave a Reply

Your email address will not be published. Required fields are marked *