ಹುಬ್ಬಳ್ಳಿ-ಧಾರವಾಡ ಸುದ್ದಿ

ಧಾರವಾಡದಲ್ಲಿ ಶಿವಕುಮಾರ ಶ್ರೀ 5ನೇ ಪುಣ್ಯಸ್ಮರಣೆ

ಅನ್ನಸಂತರ್ಪಣೆಗೆ ಪೊಲೀಸ್ -ಸಾರ್ವಜನಿಕರ ಸಾಥ್

ಧಾರವಾಡ: ಇಲ್ಲಿಯ ಸುಭಾಷ್ ರಸ್ತೆಯ ಕಾಮತ ಸರ್ಕಲ್‌ನಲ್ಲಿ ಭಾನುವಾರ ಬೆಳಿಗ್ಗೆ ತ್ರಿವಿಧ ದಾಸೋಹಿ ಸಿದ್ಧಗಂಗಾ ಕ್ಷೇತ್ರದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 5ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಟೌನ್ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಅನ್ನ ಸಂತರ್ಪಣೆ ಮಾಡಿದರು.


ಸಿಪಿಐ ಎನ್.ಸಿ.ಕಾಡದೇವರಮಠ ಜನರಿಗೆ ಪಲಾವ ಹಾಗೂ ಲಾಡು ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಳೆದ ಐದು ವರ್ಷದಿಂದ ಪೊಲೀಸರಾದ ಬಸಯ್ಯ ಸುತಗಟ್ಟಿಮಠ ನೇತೃತ್ವದಲ್ಲಿ ಅವರ ಸಿಬ್ಬಂದಿ ಹಾಗೂ ಸಾರ್ವಜನಿಕರು ಅನ್ನಸಂತರ್ಪಣೆ ಮಾಡುತ್ತ ಬಂದಿದ್ದಾರೆ.


ಇಂದು ಬೆಳಿಗ್ಗೆ ಶ್ರೀಗಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 2ಗಂಟೆ ವರೆಗೆ ಸುಮಾರು 1500ಕ್ಕೂ ಹೆಚ್ಚು ಜನರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಎಎಸ್‌ಐ ವಿರೇಶ ಬಳ್ಳಾರಿ, ಎಚ್.ಎಂ.ರೊಳ್ಳಿ, ರವಿ ಸಾಂಬ್ರಾಣಿ, ಯಲ್ಲಪ್ಪ ಮಂಟೂರು, ಶಂಕರ ಎಸ್‌ಬಿಐ, ಸಿದ್ದು ಸೇರಿದಂತೆ ನೂರಾರು ಜನ ಇದ್ದರು.

administrator

Related Articles

Leave a Reply

Your email address will not be published. Required fields are marked *