ಶಬರಿಮಲೈಗೆ ತೆರಳುವಾಗ ಅವಘಡ
ಮೇಯರ್ ಅಂಚಟಗೇರಿ ಪ್ರಯತ್ನ – ಎಡಪಲ್ನಲ್ಲಿ ಗಾಯಾಳುಗಳಿಗೆ ಚಿಕಿತ್ಸೆ
ಧಾರವಾಡ: ಧಾರವಾಡ ಜಿಲ್ಲೆಯ ವಾಹನವೊಂದು ಕೇರಳ ರಾಜ್ಯದ ಮಣಿಪುರಂ ಜಿಲ್ಲೆಯ ಎಡಪಲ್ ಎಂಬಲ್ಲಿ ನಡೆದ ಭೀಕರ ಅಪಘಾತದಲ್ಲಿ ಪಾಂಡೆ ಕುಟುಂಬದ ಸದಸ್ಯನೋರ್ವ ಮೃತಪಟ್ಟಿದ್ದಾನೆ.
ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಪಾಂಡೆ ಕುಟುಂಬಸ್ಥರು ಕೆಎ 25, ಎಬಿ 6577 ವಾಹನದಲ್ಲಿ ತೆರಳಿದ್ದಾಗ ಅಪಘಾತವಾಗಿದ್ದು, ಸುಮಿತ್ ಪಾಂಡೆ(10) ಎಂಬಾತ ಮೃತಪಟ್ಟಿದ್ದಾನೆ.
ಧಾರವಾಡದ ಸೈದಾಪುರದ ನಿವಾಸಿಗಳು ಅಯ್ಯಪ್ಪಸ್ವಾಮಿ ಭಕ್ತರು ಆಗಿದ್ದರು. ಈ ವೇಳೆ ಸೂರಜ ಪಾಂಡೆ, ನಿಖಿಲ ಪಾಂಡೆ, ಸುಶಾಂತ ಪಾಂಡೆ ಹಾಗೂ ಎಸ್ ಪಾಂಡೆ ಎಂಬುವರಿಗೆ ತೀವ್ರ ಗಾಯಗಳಾಗಿವೆ.
ವಿಷಯ ತಿಳಿದ ಮೇಯರ್ ಈರೇಶ ಅಂಚಟಗೇರಿ ಅವರು ತಕ್ಷಣ ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರ ಗಮನಕ್ಕೆ ತಂದು, ವಿದೇಶಾಂಗ ಸಚಿವ ವಿ ಮುರಳಿಧರ ಅವರ ಜತೆಗೆ ಜೋಶಿ ಅವರು ಮಾತನಾಡಿ, ಗಾಯಾಳುಗಳಿಗೆ ಮಣಿಪುರಂ ಜಿಲ್ಲೆಯ ಎಡಪಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆಸ್ಪತ್ರೆ ಸಿಬ್ಬಂದಿ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿಸಿದ್ದಾರೆ.
ಮೇಯರ್ ಅಂಚಟಗೇರಿ ಅವರ ಸಮಯ ಪ್ರಜ್ಞೆಯಿಂದ 3 ಮಂದಿ ಜೀವ ಉಳಿದಂತೆ ಆಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಲ್ಲಿ ಸಫಲರಾಗಿದ್ದಾರೆ. ಮೃತಪಟ್ಟ ಅಯ್ಯಪ್ಪ ಮಾಲಾಧಾರಿಯಾಗಿದ್ದ ಬಾಲಕನ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಮೃತದೇಹವನ್ನು ಧಾರವಾಡಕ್ಕೆ ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ.