ಹುಬ್ಬಳ್ಳಿ-ಧಾರವಾಡ ಸುದ್ದಿ

ನಕಲಿ ವೈದ್ಯನಿಗೆ ಸಚಿವ ಲಾಡ್ ಇಂಜೆಕ್ಷನ್!

ಅಕ್ರಮಕ್ಕೆ ಸಾಥ್ ನೀಡಲ್ಲ ಸಂದೇಶ ರವಾನೆ

ಧಾರವಾಡ: ನಕಲಿ ವೈದ್ಯನಿಗೆ ಮತ್ತು ಅವನ ಪರ ಬ್ಯಾಟಿಂಗ್ ಮಾಡಲು ಬಂದ ಮುಖಂಡರೊಬ್ಬರಿಗೆ ಉಸ್ತುವಾರಿ ಸಚಿವ ಸಂತೋಷ ಲಾಡ್ ಬೆವರಿಳಿಸಿ ಯಾವುದೇ ಅಕ್ರಮಕ್ಕೆ ಸಾಥ್ ನೀಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.


ಲಾಡ್ ಅವರ ಖಡಕ್ ವಾರ್ನಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಗರದ ಪ್ರವಾಸಿ ಮಂದಿರದಲ್ಲಿ ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು ಪಿಯುಸಿ ಓದಿದ ವ್ಯಕ್ತಿಯೊಬ್ಬರು ನಡೆಸುತ್ತಿದ್ದ ಆಸ್ಪತ್ರೆಯನ್ನು ಸೀಜ್ ಮಾಡಿದ್ದು, ಅದನ್ನು ತೆರವುಗೊಳಿಸಲು ಶಿಫಾರಸು ಮಾಡಿಸಲು ಕರೆ ತಂದಿದ್ದು ಸಮಸ್ಯೆ ಹೇಳಿಕೊಳ್ಳುತ್ತಿದ್ದಂತೆ ಗರಂ ಆದ ಸಚಿವರು ನಕಲಿ ವೈದ್ಯನಿಗೆ ಬೆವರಿಳಿಸಿದರು.


ಆಂದ್ರಮೂಲದ ತರುಣಕುಮಾರ ರಾಯ್ ಧಾರವಾಡದ ಬೂಸಪ್ಪ ಚೌಕ್ ನಲ್ಲಿ ಅನಧಿಕೃತ ಕ್ಲಿನಿಕ್‌ನಲ್ಲಿ ಚಿಕಿತ್ಸೆ ನಡೆಸುತ್ತಿದ್ದು, ಕೆಲ ದಿನಗಳ ಹಿಂದೆ ತಾಲೂಕಾ ವೈದ್ಯಾದಿಕಾರಿಗಳು ಸೀಜ್ ಮಾಡಿದ್ದು, ಕ್ಲಿನಿಕ್ ಓಪನ್ ಮಾಡಿಸಿಕೊಡುವಂತೆ ಕೇಳಿದಾಗ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಪ್ರಮಾಣ ಪತ್ರ ಇದೆಯೇನ್ರಿ ಎಂದು ಬೆಂಡೆತ್ತಿದ್ದಲ್ಲದೇ ರಿಜಿಸ್ಟ್ರೇಷನ್ ಇಲ್ಲೆ ವೈದ್ಯಕೀಯ ವೃತ್ತಿ ನಡೆಸಲು ಸಾಧ್ಯವಿಲ್ಲ ಎಂದು ಲಾಡ್ ಹೇಳಿ ಕಳಿಸಿದರು.

administrator

Related Articles

Leave a Reply

Your email address will not be published. Required fields are marked *