ಹುಬ್ಬಳ್ಳಿ-ಧಾರವಾಡ ಸುದ್ದಿ
ಆಕ್ಷೇಪಾರ್ಹ ಪೋಸ್ಟ : ಕೇಶ್ವಾಪುರ ಯುವಕ ಅರೆಸ್ಟ್

ಆಕ್ಷೇಪಾರ್ಹ ಪೋಸ್ಟ : ಕೇಶ್ವಾಪುರ ಯುವಕ ಅರೆಸ್ಟ್

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ತಣ್ಣಗಾಗುತ್ತಿರುವ ಹೊತ್ತಿನಲ್ಲೇ ಕೇಶ್ವಾಪುರದ ಕಿಡಿಗೇಡಿ ಯುವಕನೊಬ್ಬ ಲವ್ ಜಿಹಾದ್ ಎಂದು ಪ್ರಚೋದನಾಕಾರಿ ಪೋಸ್ಟ್ ಹಾಕಿ ವಿವಾದಕ್ಕೆ ಕಾರಣವಾಗಿದ್ದು ಆತನನ್ನು ಬೆಂಡಿಗೇರಿ ಪೊಲೀಸರು ಬಂಧಿಸಿದ್ದಾರೆ.
ಕೇಶ್ವಾಪುರದ ಪವನ್ ಎಂಬಾತ ಬೆಂಡಿಗೇರಿ ಯುವಕ ಹಾಗೂ ಆನಂದನಗರ ಯುವತಿಯ ಕುರಿತು ಕೋಮು ಭಾವನೆ ಕೆರಳಿಸುವ ಸಂದೇಶ ರವಾನಿಸಿದ ಆರೋಪದ ಮೇಲೆ ಬಂಧಿಸಿದ್ದಾರೆ. ಬಂಧಿತನನ್ನು ದಿ.19 ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ತಪ್ಪು ಕಲ್ಪನೆಯಿಂದ ಅನ್ಯ ಕೋಮಿನ ಯುವಕ ಮತ್ತು ಯುವತಿ ಕುರಿತು ಈತ ಆಕ್ಷೇಪಾರ್ಹ ಪೋಸ್ಟ್ ರವಾನೆ ಮಾಡಿದ್ದ. ಬೆಂಡಿಗೇರಿ ಠಾಣೆ ವ್ಯಾಪ್ತಿಯ ಹುಡುಗನ ದೂರಿನ ಮೇರೆಗೆ ಬೆಂಡಿಗೇರಿ ಪೊಲೀಸ್‌ರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಎರಡು ದಿನಗಳ ಹಿಂದೆ ಬಂಧಿಸಿದ್ದರು.

 

 

administrator

Related Articles

Leave a Reply

Your email address will not be published. Required fields are marked *