ಹುಬ್ಬಳ್ಳಿ-ಧಾರವಾಡ ಸುದ್ದಿ
ಸಂಪರ್ಕಕ್ರಾಂತಿ – ಸಂಕ್ರಾಂತಿ

ಸಂಪರ್ಕಕ್ರಾಂತಿ – ಸಂಕ್ರಾಂತಿ

ಸಂಪರ್ಕ ದೂರಾಗಿ ವಿತರ್ಕ ಮನೆಮಾಡಿ,
ಸ್ನೇಹವರು ಸವೆಯುತಿದೆ ಸಣ್ಣತನದಿಂದ!
ಸಮ್ಮುಖಲೆ ಹಿಂದೇಟು ಹಿಮ್ಮುಖದಿ ಛಾಟಿಯು
ಹದುಳವದು ಹಳಸುತಿದೆ ಹರಿದ ಮನದಿಂದ||

ನೇರನೇರದ ಕೊರತೆ ಮತ್ತೊಬ್ಬರ ಮೆರೆದಾಟ
ದೂರದೃಷ್ಟಿಯು ದೂರಾಗಿ ದುರಾದೃಷ್ಟ!
ನೆರೆಹೊರೆಯಲಿದ್ದರೂ ಅವರು ಇವರಾರೋ
ದುರುಪಯೋಗದ ಜನಕಿದುವೆ ಅದೃಷ್ಟ||

ಏಳಬೇಕಿದೆ ನಾವು ತಾಳ ಮೇಳಗಳೊಂದಿದಾಗಿ
ಬಾಳಬೇಕಾಗಿದೆ ಭಾವ ಭಾಷೆಗಳ ಬಂಧನದಿ|
ಕೀಳರಿಮೆ ಮೇಲ್ಮಾತು ಸಾಕು ಸಾಕಿನ್ನು
ಹಾಳು ಹರಟೆಯ ಬಿಟ್ಟು ಬೆಳೆಯೋಣ ಚೆಂದದಿ||

ಪ್ಲವ ಸಂವತ್ಸರದ ಈ ಶುಭ ಸಂಕ್ರಾಂತಿ
ವಿಪ್ಲವಗಳೆಲ್ಲ ದೂಡಿ ಪಲ್ಲವಿಸಿಸಲಿ ಚಿಗುರು|
ಕ್ಲೇಶ ಪಾಶಗಳ ಹಂಗು ಹರಿದೊಗೆದು
ಕಲ್ಮಶ ಕಳೆದು ಎಲ್ಲರದು ಒಂದಾಗಲಿ ಉಸಿರು||

ಸಂಪರ್ಕ ದೂರಾಗಿ ಕ್ರಾಂತಿಗಾಗಿದೆ ದಾರಿ
ಪರ್ಕವನು ದೂರ ಸರಿಸಿದರೆ ಅದುವೆ ಸಂಕ್ರಾಂತಿ|
ತರ್ಕಪರ್ಕವ ಅಳಿಸಿ ಶಾಂತಿ ಮಾರ್ಗವ ತೋರಿ
ಸಂಕಲಿತ ಭಾವ ಬಲಗೊಳ್ಳಲಿ, ಸಿಗಲಿ ಶಾಂತಿ||
“ಜೀವಿ”

 


ಗದಿಗೆಯ್ಯಾ ವಿ ಹಿರೇಮಠ, ಹುಬ್ಬಳ್ಳಿ

administrator

Related Articles

Leave a Reply

Your email address will not be published. Required fields are marked *