ಹುಬ್ಬಳ್ಳಿ-ಧಾರವಾಡ ಸುದ್ದಿ
ಮಹದಾಯಿ : ನಾಯಕರಿಗೆ ಇಚ್ಛಾಶಕ್ತಿಯದ್ದೇ ಕೊರತೆ

ಮಹದಾಯಿ : ನಾಯಕರಿಗೆ ಇಚ್ಛಾಶಕ್ತಿಯದ್ದೇ ಕೊರತೆ

ಬೊಮ್ಮಾಯಿ ಪ್ರಯತ್ನಿಸುತ್ತಿಲ್ಲ- ಜೋಶಿಗೆ ಬೇಕಾಗಿಲ್ಲ

ಹುಬ್ಬಳ್ಳಿ: ಕೇವಲ50 ಕೋಟಿ ರೂಪಾಯಿ ವೆಚ್ಚ ಮಾಡಿದರೂ 3.50ಟಿಎಂಸಿ ನೀರು ಮಹಾದಾಯಿಗೆ ಬಂದು ಬೀಳುತ್ತದೆ. ಆದರೆ ನಮ್ಮ ರಾಜಕೀಯ ಮುಖಂಡರ ಇಚ್ಛಾಶಕ್ತಿಯ ಕೊರತೆಯಿಂದ ಇದು ಸಫಲವಾಗುತ್ತಿಲ್ಲ ಎಂದರು ರೈತ ಸೇನಾ ಕರ್ನಾಟಕದ ಅಧ್ಯಕ್ಷ ವೀರೇಶ ಸೊಬರದಮಠ ಎಂದು ಹೇಳಿದರು.


ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ಯೋಜನೆಗಾಗಿ ಪಾದಯಾತ್ರೆ ಮಾಡಿದ್ದ ಬೊಮ್ಮಾಯಿ ಅವರೇ ಈಗ ಅವರೇ ಸಿಎಂ ಆಗಿದ್ದು,ಗದ್ದುಗೆ ಏರಿದ ನಂತರ ಗಂಭೀರ ಯಾವುದೇ ಪ್ರಯತ್ನ ಮಾಡುತ್ತಿಲ್ಲ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮಹಾದಾಯಿ ಯೋಜನೆ ಜಾರಿಯಾಗೋದು ಬೇಕಿಲ್ಲವಾದ್ದರಿಂದ ಯೋಜನೆ ಜಾರಿಗೆ ಪ್ರಯತ್ನಿಸುತ್ತಿಲ್ಲ ಎಂದು ನೇರವಾಗಿ ಆರೋಪಿಸಿದರು.
ಕೇವಲ 50 ಕೋಟಿ ರೂಪಾಯಿ ವ್ಯಯಿಸಿದರೆ ನಮ್ಮ ಪಾಲಿನ ನೀರು ನಮಗೆ ಬರುತ್ತದೆ.ಇನ್ನಾದರೂ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲಿ ಎಂದರಲ್ಲದೇ ನಾಳೆ ಹುಬ್ಬಳ್ಳಿಗೆ ಸಿಎಂ ಬರಲಿದ್ದು ಅವರಿಗೆ ಮಹದಾಯಿ ಜಾರಿಗೊಳಿಸಲು ಮನವಿ ಅರ್ಪಿಸುವುದಾಗಿ ಹೇಳಿದರು.

 

 

administrator

Related Articles

Leave a Reply

Your email address will not be published. Required fields are marked *