ಹುಬ್ಬಳ್ಳಿ: ಪಟ್ಟಣದ ವಾರ್ಡ್ ನಂಬರ 57 (69)ರ ಎಲ್ಲಾಪುರ ಓಣಿ, ಕರ್ಕಿ ಬಸವೇಶ್ವರ ನಗರ, ಗೊಲ್ಲರ ಓಣಿ ಮುಂತಾದ ಪ್ರದೇಶಗಳ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯದ ನೂರಾರು ಜನರು ಯಲ್ಲಾಪುರ ಓಣಿಯಲ್ಲಿರುವ ಎಐಎಂಐಎಂ ಪಕ್ಷದ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಪಕ್ಷದ ಮುಖಂಡ ವಿಜಯ್ ಗುಂಟರಾಳ, ಹು-ಧಾ ಪೂರ್ವ ಕ್ಷೇತ್ರದ ಅಧ್ಯಕ್ಷ ಇಮ್ತಿಯಾಜ್ ಬಿಳಿಪಸಾರ್, ಕಸ್ತೂರೆವ್ವ ಬೆಳಗುಂದಿ, ಜೈನುದ್ದಿನ್ ಚನ್ನಾಪುರ, ಶರಣಪ್ಪ ಖಾನಾಪುರ, ಪರಶುರಾಮ್ ಕಡಕೋಳ, ಗಾಳೆಪ್ಪ ದ್ವಾಸಲಕೇರಿ, ಮಂಜುನಾಥ್ ನಾಗನೂರ, ಹುಲಿಗೆಮ್ಮ ಗೊಲ್ಲರ್, ಶಿವರಾಜ್ ಗೋಸಂಗಿ, ಅಭಿಷೇಕ್ ಸೋಲಬಣ್ಣವರ್, ಕಲೀಲ್ ಧಾರವಾಡ, ಚಂದ್ರಶೇಖರ್ ಚಣ್ಣನವರ್, ತಾಯಪ್ಪ ಕಣೆಕಲ್ ಮುಂತಾದವರಿದ್ದರು.