ಹುಬ್ಬಳ್ಳಿ-ಧಾರವಾಡ ಸುದ್ದಿ
ಧಾರವಾಡಕ್ಕೆ ಅಸೂಟಿ ನಿಕ್ಕಿ: ಘೋಷಣೆಯೊಂದೆ ಬಾಕಿ

ಧಾರವಾಡಕ್ಕೆ ಅಸೂಟಿ ನಿಕ್ಕಿ: ಘೋಷಣೆಯೊಂದೆ ಬಾಕಿ

ಕೇಂದ್ರ ಸಚಿವ ಜೋಶಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಎದುರಾಳಿ

ಹುಬ್ಬಳ್ಳಿ : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ರಾಜ್ಯದ ಬಹುತೇಕ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದ್ದು ಇಂದು ರಾತ್ರಿಯೊಳಗೆ ಯಾವುದೇ ಕ್ಷಣದಲ್ಲಿ ಪ್ರಕಟವಾಗಬಹುದಾಗಿದೆ.


ಧಾರವಾಡ ಕ್ಷೇತ್ರಕ್ಕೆ ಅಂತಿಮವಾಗಿ ಕಾಂಗ್ರೆಸ್ ಹಿಂದುಳಿದ ಕೋಟಾದಡಿ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ವಿನೋದ ಅಸೂಟಿಯವರಿಗೆ ಟಿಕೆಟ್ ಪಕ್ಕಾ ಆಗಿದ್ದು ವರಿಷ್ಠರು ಟಿಕೆಟ್ ಅಂತಿಮಗೊಂಡಿದೆ ತಕ್ಷಣ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ಗ್ರೀನ್ ಸಿಗ್ನಲ್ ನೀಡಿದ್ದಾರೆನ್ನಲಾಗಿದೆ.
ಈಗಾಗಲೇ ಅಸೂಟಿ ಸಹ ಜಿಲ್ಲೆಯ ಕ್ಷೇತ್ರಗಳ ಪ್ರಮುಖ ಮುಖಂಡರುಗಳಿಗೆ ಕರೆ ಮಾಡಿ ತಮಗೆ ಟಿಕೆಟ್ ಅಧಿಕೃತಗೊಂಡಿದ್ದು ತಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಮನವಿ ಮಾಡಿದ್ದಾರೆನ್ನಲಾಗಿದೆ.


2018ರಲ್ಲಿ ನವಲಗುಂದ ಕ್ಷೇತ್ರದಲ್ಲಿ ಯುವ ಕೋಟಾದಡಿ ಸ್ಪರ್ಧಿಸಿ ತ್ರಿಕೋನ ಮುಖಾಮುಖಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಅಲ್ಲದೇ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಆದ ಯುವ ಪಡೆ ಹೊಂದಿದ್ದಾರೆ.
ಕಾಂಗ್ರೆಸ್‌ನ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಂತಿಮ ಹಂತದವರೆಗೂ ಲಿಂಗಾಯತ ಕೋಟಾದಲ್ಲಿ ಶಿವಲೀಲಾ ಕುಲಕರ್ಣಿ, ಮೋಹನ ಲಿಂಬಿಕಾಯಿ, ಒಬಿಸಿ ಕೋಟಾದಲ್ಲಿ ವಿನೋದ ಅಸೂಟಿ, ಲೋಹಿತ ನಾಯ್ಕರ ಹೆಸರುಗಳಿದ್ದವು.

administrator

Related Articles

Leave a Reply

Your email address will not be published. Required fields are marked *