ಹುಬ್ಬಳ್ಳಿ-ಧಾರವಾಡ ಸುದ್ದಿ

ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿ

ರಾಜ್ಯ ತಂಡದಲ್ಲಿ ಅವಳಿನಗರದ ಪರೀಕ್ಷಿತ್, ರೋಹಿತಕುಮಾರಗೆ ಸ್ಥಾನ

ಹುಬ್ಬಳ್ಳಿ: ಧಾರವಾಡದ ವಲಯದ ಆಟಗಾರರಾದ ಪರೀಕ್ಷಿತ್ ಒಕ್ಕುಂದ ಹಾಗೂ ರೋಹಿತಕುಮಾರ ಎ.ಸಿ. ಅವರು ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಗೆ ಕೆಎಸ್ ಸೋಮವಾರ ಪ್ರಕಟಿಸಿರುವ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮೂರು ಪಂದ್ಯಗಳ ಸರಣಿ ಇದಾಗಿದ್ದು ಉತ್ತಮ ಸಾಧನೆ ಮೂಲಕ ಇಬ್ಬರೂ ತಂಡಕ್ಕೆ ಆಯ್ಕೆಯಾಗಿದ್ದಾರೆ.


ಎಸ್.ಡಿ.ಎಂ ಕ್ರಿಕೆಟ್ ಅಕಾಡೆಮಿಯ ಆಟಗಾರ ಪರೀಕ್ಷಿತ್ ಒಕ್ಕುಂದ ಆರಂಭಿಕ ಆಟಗಾರನಾಗಿದ್ದು, ಇದೇ ತಿಂಗಳು ಕೊನೆಗೊಂಡ ಧಾರವಾಡ ವಲಯ ಕೆಎಸ್‌ಸಿಎ ಪ್ರಥಮ ಡಿವಿಷನ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಅವರು ಟೂರ್ನಿಯಲ್ಲಿ ಒಂದು ದ್ವಿಶತಕ, ಒಂದು ಶತಕ ಹಾಗೂ ಮೂರು ಅರ್ಧ ಶತಕ ಸೇರಿದಂತೆ 11 ಪಂದ್ಯಗಳಿಂದ 691 ರನ್ ಬಾರಿಸಿದ್ದಾರೆ. ಅದಕ್ಕೂ ಮುನ್ನ ನಡೆದ ಎಸ್.ಎ. ಶ್ರೀನಿವಾಸನ್ ಮೆಮೊರಿಯಲ್ ಅಂತರ ವಲಯ ಕ್ರಿಕೆಟ್ ಟೂರ್ನಿಯಲ್ಲಿ ರನ್ ಮಳೆ ಸುರಿಸಿದ್ದರು.


ಎಡಗೈ ಸ್ಪಿನ್ನರ್ ಆಗಿರುವ ರೋಹಿತ್ ಕುಮಾರ್ ಎ.ಸಿ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ಆಟಗಾರ, ಅವರು ಪ್ರಸಕ್ತ ಋತುವಿನಲ್ಲಿ 22 ಪಂದ್ಯದಲ್ಲಿ 62 ವಿಕೆಟ್ ಪಡೆದಿದ್ದಾರೆ. ಪ್ರಥಮ ಡಿವಿಷನ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಎಚ್‌ಎಸ್‌ಸಿ ಪ್ರತಿನಿಧಿಸಿ 20 ವಿಕೆಟ್ ಕಬಳಿಸಿದ್ದರು. ರೋಹಿತ್ ಕುಮಾರ್ ಕಳೆದ ಬಾರಿಯೂ ಸಿ.ಕೆ.ನಾಯ್ಡು ಟೂರ್ನಿಯಲ್ಲಿ ರಾಜ್ಯ ತಂಡ ಪ್ರತಿನಿಧಿಸಿದ್ದರು.

administrator

Related Articles

Leave a Reply

Your email address will not be published. Required fields are marked *