ಹುಬ್ಬಳ್ಳಿ-ಧಾರವಾಡ ಸುದ್ದಿ
ಅಕ್ರಮ ಮದ್ಯ ಮಾರಾಟ ಬಂದ್‌ಗೆ ವಾರದ ಗಡುವು; ತಾಲೂಕಿನಾದ್ಯಂತ ಹೆದ್ದಾರಿ ಬಂದ್ ಎಚ್ಚರಿಕೆ

ಅಕ್ರಮ ಮದ್ಯ ಮಾರಾಟ ಬಂದ್‌ಗೆ ವಾರದ ಗಡುವು; ತಾಲೂಕಿನಾದ್ಯಂತ ಹೆದ್ದಾರಿ ಬಂದ್ ಎಚ್ಚರಿಕೆ

ಕಲಘಟಗಿ: ತಾಲೂಕಿದ್ಯಾಂತ ಅಕ್ರಮ ಮದ್ಯ ಮಾರಾಟ ಮಿತಿಮೀರಿದ್ದು, ಅದನ್ನು ಬಂದ್ ಮಾಡುವಂತೆ ಒಂದು ವಾರ ಗಡುವು ನೀಡಿರುವುದಾಗಿ ಮಾಜಿ ಶಾಸಕ ಸಂತೋಷ ಲಾಡ್ ಇಂದಿಲ್ಲಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಾದ್ಯಾಂತ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದ್ದು, ನಾನು ಭೇಟಿ ನೀಡಿದ ಹಳ್ಳಿಗಳಲ್ಲೂ ಈ ಬಗ್ಗೆ ದೂರು ನೀಡಿದ್ದಾರೆ ಎಂದರು.
ಕೂಡಲೇ ಸಂಬಂಧಿಸಿದ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು
ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಈಗಾಗಲೇ ಪತ್ರವನ್ನು ಬರೆಯಲಾಗಿದ್ದು, ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ತಾಲೂಕಿನಾದ್ಯಂತ ಹೆದ್ದಾರಿ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸುವುದಾಗಿ ಲಾಡ್ ಹೇಳಿದರು.
ತಾಲೂಕಾ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ್, ಲಿಂಗರೆಡ್ಡಿ ನಡುವಿನಮನಿ, ವೈ.ಬಿ. ದಾಸನಕೊಪ್ಪ ಎಂ.ಎಸ್. ಬೆಳ್ಳಿವಾಲೆ, ಅಜ್ಮತ್ ಜಹಗೀರದಾರ್, ಕುಮಾರ್ ಕಂಡೇಕರ, ಪರಶುರಾಮ್ ಎತ್ತಿನಗುಡ್ಡ ಇನ್ನಿತರರಿದ್ದರು.

 

administrator

Related Articles

Leave a Reply

Your email address will not be published. Required fields are marked *