ಹುಬ್ಬಳ್ಳಿ-ಧಾರವಾಡ ಸುದ್ದಿ
ಕಿರಣ ಕಟ್ಟಿಮನಿಗೆ ದೇಶದ ಉತ್ತಮ ’ಎಂಪಿಒ’ ಪ್ರಶಸ್ತಿ ಪ್ರದಾನ

ಕಿರಣ ಕಟ್ಟಿಮನಿಗೆ ದೇಶದ ಉತ್ತಮ ’ಎಂಪಿಒ’ ಪ್ರಶಸ್ತಿ ಪ್ರದಾನ

ಬಾದಾಮಿ: ಎಂ.ಸಿ.ಎಲ್.ಕಂಪನಿಯ ವತಿಯಿಂದ ದೇಶದ ಉತ್ತಮ ಎಂ.ಪಿ.ಒ.ಪ್ರಶಸ್ತಿಗೆ ಆಯ್ಕೆಯಾಗಿರುವ ಪಟ್ಟಣದ ಅಗಸ್ತ್ಯ ಫಾರ್ಮರ್‍ಸ್ ಪ್ರೊಡ್ಯೂಸರ್‍ಸ ಕಂಪನಿಯ ಮಾಲೀಕ ಕಿರಣ ಕಟ್ಟಿಮನಿ ಅವರಿಗೆ ಮುಂಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೀರಾ ಕ್ಲೀನ್ ಫ್ಯೂಲ್ಸ್ ಲಿಮಿಟೆಡ್ ನಿರ್ದೇಶಕ ಡಾ.ಲವೇಶ ಜಾಧವ ಮತ್ತು ಸಿನಿಯರ್ ಬಿಡಿಎ ಶ್ರವಣ ಮಾನೆ ಜಂಟಿಯಾಗಿ ಪ್ರಶಸ್ತಿ ಪ್ರದಾನ ಮಾಡಿದರು.


ಮೀರಾ ಕ್ಲೀನ್ ಫ್ಯೂಲ್ಸ್ ಲಿಮಿಟೆಡ್ ನಿರ್ದೇಶಕ ಡಾ.ಲವೇಶ ಜಾಧವ ಮಾತನಾಡಿ, ಬಾದಾಮಿ ತಾಲೂಕು ಹಸಿರು ಕ್ರಾಂತಿಯ ಮೇಲೆ ಉದಯೋನ್ಮುಖ ತಾಲೂಕಾಗಿ ಪ್ರಶಸ್ತಿ ಮತ್ತು ಮಾನ್ಯತೆ ಪಡೆದಿದೆ. ಇದು ರಾಷ್ಟ್ರದ ಹೆಮ್ಮೆ ಮತ್ತು ಇಡೀ ತಾಲೂಕಿಗೆ ಹೆಮ್ಮೆಯ ಕ್ಷಣವಾಗಿದೆ. ಮೊದಲು ಮೀರಾ ಶುದ್ಧ ಇಂಧನವನ್ನು ಪ್ರಾರಂಭಿಸಲು ಬಾದಾಮಿ ಅಗಸ್ತ್ಯ ಫಾರ್ಮರ್ಸ ಪ್ರೊಡ್ಯೂಸರ್ ಕಂಪನಿಗೆ ರೂ. 240 ಕೋಟಿ ಮಂಜೂರು ಮೌಲ್ಯದ ಸೀಮಿತ ಕಾರ್ಖಾನೆ ಇದಾಗಿದೆ. ಇದು 2000 ಯುವಕರಿಗೆ ಉದ್ಯೋಗದ ಅವಕಾಶ ಮತ್ತು ಮಹಿಳಾ ಸಬಲೀಕರಣ ಮಾಡಲಾಗುತ್ತಿದೆ ಎಂದು ಹೇಳಿದರು.

administrator

Related Articles

Leave a Reply

Your email address will not be published. Required fields are marked *