ಕುಂದಗೋಳ: ಕಳೆದ ಮಾರ್ಚ್ದಿಂದ ಆರಂಭವಾಗಿದ್ದ ಕೋವಿಡ್ ಎರಡನೇ ಅಲೆಯಲ್ಲಿ ಬಹಳಷ್ಟು ಶ್ರಮಪಟ್ಟು ಕ್ಷೇತ್ರದ ಜನತೆಯ ಆರೋಗ್ಯ ಕಾಪಾಡಿದ ಎಲ್ಲ ಕೊರೊನಾ ವಾರಿಯರ್ಸ್ಗಳನ್ನು ಶಾಸಕಿ ಕುಸುಮಾವತಿ ಶಿವಳ್ಳಿ ಅವರು ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಿದರು.
ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೊರೊನಾ ಸೇನಾನಿಗಳಿಗೆ ಪ್ರಸಂಶನಾ ಪತ್ರದೊಂದಿಗೆ ಸನ್ಮಾನಿಸಿ ಕಿಟ್ ವಿತರಿಸಿ ಮಾತನಾಡಿ, ಕೋವಿಡ್ ಸಂದಿಗ್ಧದ ಪರಸ್ಥಿತಿಯಲ್ಲೂ ಕೂಡಾ ಆರೋಗ್ಯ ಇಲಾಖೆಯವರು ತಮ್ಮ ಜೀವವನ್ನು ಲೆಕ್ಕಿಸದೇ ಗುಣಮಟ್ಟದ ಚಿಕಿತ್ಸೆ ಮೂಲಕ ತಮ್ಮ ಆಸ್ಪತ್ರೆಗಳಲ್ಲಿ ಆರೋಗ್ಯವಂತರನ್ನಾಗಿಸಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ವಾರಿಯರ್ಸ್ಗಳಾದ ಪೌರ ಇಲಾಕೆಯ ಸಿಬ್ಬಂದಿ, ಕಾರ್ಮಿಕರು, ವೈದ್ಯಾಧಿ ಕಾರಿಗಳು, ಪತ್ರಕರ್ತರು, ಡಿ,ಗ್ರುಪ್ ಸಿಬ್ಬಂದಿಗೆ ಶಾಲು ಹೊದಿಸಿ ಸನ್ಮಾನಿಸಿ ಪ್ರಸಂಶನಾ ಪತ್ರ ವಿತರಿಸಿದರು.
ವೈದ್ಯಾಧಿಕಾರಿಗಳಾದ ಭಾಗೀರಥಿ ಮೆಡ್ಲೇರಿ, ಶಾರದಾ, ಎಸ್.ಎಂ.ಕಗ್ಗಲಗೌಡ್ರ, ತಿಮ್ಮಯ್ಯ, ರವೀಂದ್ರ, ವಿನಾಯಕ ಗಡ್ಡಿ, ಪಟ್ಟಣ ಪಂಚಾಯ್ತಿ ಸದಸ್ಯೆ ಹನಮವ್ವ ಕೋರಿ, ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ವೀಣಾ ಆನಿ, ಮುಖಂಡರಾದ ಸಲೀಮ ಕ್ಯಾಲಕೊಂಡ, ಬಸವರಾಜ ಶಿರಸಂಗಿ, ಬಸವರಾಜ ರೇವಡೇನವರ, ಗುರು ಚಲವಾದಿ, ಸಲೀಮ ಕಡ್ಲಿ ಇದ್ದರು.